Wednesday, November 29, 2023
  • Login
The Newz Mirror
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
The Newz Mirror
No Result
View All Result
  TRENDING
ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ November 29, 2023
ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video November 28, 2023
KSRTC |  ಅಧಿಕಾರಿಯೊಬ್ಬರ ಕೈಗೊಂಬೆ ಆದ್ರಾ KSRTC ಎಂಡಿ.?! November 28, 2023
ಹಿರಿಯ ನಟಿ ಲೀಲಾವತಿಗೆ  ಡಿಕೆಶಿ ಕೈ ಮುಗಿದು ಹೇಳಿದ್ದೇನು.? With video November 28, 2023
ಬಿಬಿಎಂಪಿ ಗುತ್ತಿಗೆದಾರ ಹಠಾತ್ ನಿಧನ November 27, 2023
Next
Prev
December 28, 2021
editorbyeditor

“ನಷ್ಟ ಕೊಡಿ ಪ್ರತಿಭಟನೆ ಮಾಡಿ ; ಇಲ್ಲಾಂದ್ರೆ ಬಂದ್ ಮಾಡಬೇಡಿ”

“ನಷ್ಟ ಕೊಡಿ ಪ್ರತಿಭಟನೆ ಮಾಡಿ ; ಇಲ್ಲಾಂದ್ರೆ ಬಂದ್ ಮಾಡಬೇಡಿ”
0
SHARES
80
VIEWS
Share on WhatsAppShare on TwitterShare on Facebook

ಬೆಂಗಳೂರು, ( www.thenewzmirror.com ) :

ಒಂದ್ಕಡೆ ಕರ್ನಾಟಕ, ಕನ್ನಡಾಂಬೆಗೆ ಮಾಡಿದ ಅಪಮಾನ.., ಮತ್ತೊಂದ್ಕಡೆ ಕನ್ನಡಿಗರ ಒಗ್ಗಟ್ಟು ಪ್ರದರ್ಶನ ಮಾಡೋ ಸಮಯ.., ಇದೆಲ್ಲಾದರ ನಡುವೆ ವಿವಿಧ ಕನ್ನಡ ಪರ ಸಂಘಟನೆಗಳು ಇದೇ 31 ರಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ. ಇದೆಲ್ಲದ್ರ ನಡುವೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬರೆದಿರೋ ಪತ್ರವೊಂದು ಭಾರೀ ಚರ್ಚೆಗೆ ಕಾರಣವಾಗೋ ಜತೆಗೆ ಹೋರಾಟಗಾರರ ಹೆಜ್ಜೆ ಹಿಂದೆ ಇಡುವಂತೆ ಮಾಡಿದೆ.

RELATED POSTS

ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ

ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video

ಸಾಮಾಜಿಕ ಹೋರಾಟಗಾರ ಹೆಚ್. ಎಂ. ವೆಂಕಟೇಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬರೆದ ಪತ್ರ ಇದೀಗ ಕನ್ನಡ ಹೋರಾಟಗಾರರು ಆತ್ಮಾವಲೋಕ‌ನ ಮಾಡಿಕೊಳ್ಳುವಂತೆ ಮಾಡಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬರೆದ ಇ-ಮೇಲ್ ಪ್ರತಿ

ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವುದರಿಂದ ಬಂದ್ ನಿಂದ ಆಗುವ ನಷ್ಟಗಳನ್ನ ತುಂಬಿ ಕೊಡುವಂತೆ ಮುಚ್ಚಳಿಕೆಬರೆಸಿಕೊಳ್ಳುವ ಬಗ್ಗೆ ಎಂಬ ಶೀರ್ಷಿಕೆಯಡಿ ಇ- ಮೇಲ್ ಮಾಡಿರೋದು ಕನ್ನಡಿಗರ ಸ್ವಾಭಿಮಾನ ಕೆರಳುವಂತೆ ಮಾಡಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗ್ತಿದೆ.

ಕೊರೊನಾ ಸನ್ನಿವೇಶದಲ್ಲಿ ಜನರ ಬದುಕುಗಳಿಗೆ ಆರ್ಥಿಕ ಹಿಂಜರಿತ ಎನ್ನೋದು ಬಲವಾದ ಪೆಟ್ಟು ನೀಡಿದೆ.ಇಂಥಾ ಸಂದರ್ಭದಲ್ಲಿ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳ ಧೋರಣೆ ಖಂಡಿತಾ ಸರಿಯಲ್ಲ..ಈ ಹೋರಾಟಗಾರರಿಗೆ ಕರ್ನಾಟಕ್ ಬಂದ್ ನಿಂದ ಆಗಬಹುದಾದ ನಷ್ಟ ತುಂಬಿಕೊಡಲಿಕ್ಕೆ ಸಾಧ್ಯವಿದೆಯಾ..? ಎಂದು ಪ್ರಶ್ನಿಸಿರುವ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಪೊಲೀಸ್ ಕಮಿಷನರ್ ಗೆ ಕನ್ನಡಪರ ಹೋರಾಟಗಾರರಿಂದ ಮುಚ್ಚಳಿಕೆ ಬರೆಯಿಸಿಕೊಂಡೇ ಅನುಮತಿ ಕೊಡುವ ಬಗ್ಗೆ ಪರಿಶೀಲಿಸಿ ಎಂದು ಮನವಿ ಮಾಡಿದ್ದಾರೆ.

ಸಾಮಾಜಿಕ ಹೋರಾಟಗಾರ ಹೆಚ್. ಎಂ ವೆಂಕಟೇಶ್

ಡಿಸೆಂಬರ್ 31 ರಂದು ರಾಜ್ಯದ ಜನತೆ ಹೊಸ ವರ್ಷದ ಸ್ವಾಗತ ಮಾಡುವ ತವಕದಲ್ಲಿರುವಾಗ್ಲೇ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ, ಗಿರೀಶ್ ಗೌಡ ಸೇರಿಸಂತೆ ಹಲವು ಕನ್ನಡಪರ ಸಂಘಟನೆಗಳು ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಕರ್ನಾಟಕ ಬಂದ್ ಗೆ ಕರೆಕೊಟ್ಟಿವೆ. ಕೂಡಲೇ ಎಂಇಎಸ್ ಅನ್ನ ನಿಷೇಧ ಮಾಡಬೇಕು ಎನ್ನುವುದು ಇವರ ಪ್ರಮುಖ ಬೇಡಿಕೆಯಾಗಿದೆ.

ಕನ್ನಡದ ಅಸ್ಮಿತೆಗೆ ಮರಾಠಿಗರಿಂದ ಅಪಮಾನವಾಗಿದೆ..ಇದು ಪ್ರತಿಯೋರ್ವ ಕನ್ನಡಿಗ ಖಂಡಿಸುವ ಸಂಗತಿ…, ಒಂದು ವೇಳೆ ಬಂದ್ ಆಗಿದ್ದೇ ಆದಲ್ಲಿ ಆಗುವಂಥಹ ನಷ್ಟ ಭರಿಸುವವರು ಯಾರು ಎನ್ನುವ ಪ್ರಶ್ನೆಗೆ ಕನ್ನಡ ಪರ ಸಂಘಟನೆಗಳಿಂದ ಯಾವುದೇ ಉತ್ತರ ಸಿಗೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯನೇ…

ಇದೇ ವಿಚಾರವನ್ನ ಇಟ್ಟುಕೊಂಡು ಸಾಮಾಜಿಕ ಹೋರಾಟಗಾರ ನಗರ ಪೊಲೀಸ್ ಆಯುಕ್ತರಿಗೆ ಇ- ಮೇಲ್ ಮಾಡಿದ್ದು ಯಾರು ಬಂದ್ ಗೆ ಕರೆ ಕೊಡ್ತಾರೋ ಅವ್ರಿಂದ ನಷ್ಟ ತುಂಬಿಸಿಕೊಳ್ಳುವಂತೆ ಮುಚ್ಚಳಿಕೆ ಬರೆಸಿಕೊಳ್ಳಿ ಅಂತ ಮನವಿ ಮಾಡಿದ್ದಾರೆ.

ಕೋರ್ಟ್ ಕೂಡ ಯಾರು ಬಂದ್ ಗೆ ಕರೆಕೊಡ್ತಾರೋ ಅವ್ರಿಂದ ನಷ್ಟವನ್ನ ಭರಿಸಬೇಕೆಂಬ ಆದೇಶವಿದೆ. ಅದೇ ಆದೇಶವನ್ನ ಉಲ್ಲೇಖಿಸಿ ಸಾಮಾಜಿಕ ಹೋರಾಟಗಾರ ಈ ಪತ್ರ ಬರೆದಿದ್ದು ಕನ್ನಡ ಪರ ಹೋರಾಟಗಾರರ ಸಿಟ್ಟಿಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗ್ತಿದೆ.

ಬಂದ್ ಮಾಡುವುದರಿಂದ ಬೀದಿಬದಿ ವ್ಯಾಪಾರಿಗಳು, ಹೊಟೇಲ್, ವ್ಯಾಪಾರ ವಹಿವಾಟಿನ ಮೇಲೆ ಜೊಡೆತ ಬೀಳಲಿದೆ. ಹೀಗಾಗಿ ಬಂದ್ ವಾಪಾಸ್ ಪಡೆಯುವಂತೆ ಮನವಿ ಮಾಡಿ, ಒಂದು ವೇಳೆ ಒಪ್ಪದಿದ್ದರೆ ಬಂದ್ ನಿಂದ ಆಗುವ ನಷ್ಟವನ್ನ ಭರಿಸುವಂತೆ ಸೂಚನೆ ನೀಡಿ ಅಂತ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಈವರೆಗೂ ಕರ್ನಾಟಕ ಬಂದ್ ಗೆ ಅವಕಾಶ ನೀಡಬೇಕೆಂದು ಕನ್ನಡಪರ ಹೋರಾಟಗಾರರು ಮನವಿ ಸಲ್ಲಿಸಿಲ್ಲವಂತೆ ಒಂದು ವೇಳೆ ಮನವಿ ಸಲ್ಲಿಸಿದರೆ ಮುಚ್ಚಳಿಕೆ ಒತದರ ಬರೆಸಿಕೊಳ್ಳೋ ಅನಿವಾರ್ಯತೆಯಿದೆ. ಬಂದ್ ಗೆ ಮುಚ್ಚಳಿಕೆ ಬರೆಸಿಕೊಳ್ಳದೆ ಅವಕಾಶ ಕೊಟ್ಟರೆ ಅದು ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತಾಗುತ್ತೆ. ಈ ನಿಟ್ಟಿನಲ್ಲಿ ಕಮಿಷನರ್ ಕಮಲಪಂತ್ ಆಲೋಚಿಸಬೇಕಿದ್ದು, ಕನ್ನಡಪರ ಹೋರಾಟಗಾರರನ್ನ ಕರೆಸಿ ಮನವೊಲಿಸುತ್ತಾರಾ ಇಲ್ಲಾ ಅನುಮತಿ ಕೊಟ್ಟು ಮುಚ್ಚಳಿಕೆ ಬರೆಸಿಕೊಳ್ತಾರಾ ಕಾದು ನೋಡ್ಬೇಕು.

ಸಾಮಾಜಿಕ ಕಾರ್ಯಕರ್ತ ಹೆಚ್. ಎಂ ವೆಂಕಟೇಶ್ ಬರೆದಿರುವ ಪತ್ರ ಕೆಲವರಿಗೆ ಅತಿ ಅನಿಸಿದರೂ ವಾಸ್ತವದಲ್ಲಿ ಪತ್ರ ಬರೆದಿದ್ದು ಮುಂದೆ ಯಾರಾದರೂ ಇಂಥ ನಿರ್ಧಾರ ಮಾಡುತ್ತಾರೆ ಅಂದರೆ ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Tags: #bangalore#bjp#bmtc#police#thenewzmirrorBangalorebbmpbundhmvipskamalpanthkarnataka bandhprotestthenewzmirror
Join Our Whatsapp Group

Read More

ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ

November 29, 2023 No Comments
Read More »

ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video

November 28, 2023 No Comments
Read More »

KSRTC |  ಅಧಿಕಾರಿಯೊಬ್ಬರ ಕೈಗೊಂಬೆ ಆದ್ರಾ KSRTC ಎಂಡಿ.?!

November 28, 2023 No Comments
Read More »

ಬಿಬಿಎಂಪಿ ಗುತ್ತಿಗೆದಾರ ಹಠಾತ್ ನಿಧನ

November 27, 2023 No Comments
Read More »

ಕಡಲೇಕಾಯಿ ಪ್ರಿಯರಿಗೆ ಗುಡ್ ನ್ಯೂಸ್ | ಡಿಸೆಂಬರ್ 2 ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಡಲೆಕಾಯಿ ಪರಿಷೆಗೆ ಸಿದ್ಧತೆ

November 27, 2023 No Comments
Read More »

Leave a Reply Cancel reply

Your email address will not be published. Required fields are marked *

Next Post
ಕರ್ನಾಟಕ ಬಂದ್ ಸಕ್ಸಸ್ ಆಗೋದಿಲ್ಲ…..!!!

ಕರ್ನಾಟಕ ಬಂದ್ ಸಕ್ಸಸ್ ಆಗೋದಿಲ್ಲ.....!!!

ಭಾರತದ ಕಿರಿಯ ಕವಯತ್ರಿಯ ಕವನ ಸಂಕಲನ ಬಿಡುಗಡೆ

ಭಾರತದ ಕಿರಿಯ ಕವಯತ್ರಿಯ ಕವನ ಸಂಕಲನ ಬಿಡುಗಡೆ

The Newz Mirror

  • The Newz Mirror

© 2021 The Newz Mirror - Copy Right Reserved The Newz Mirror.

No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ

© 2021 The Newz Mirror - Copy Right Reserved The Newz Mirror.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In