ಬೆಂಗಳೂರು, (www.thenewzmirror.com) ;
ಸಹಕಾರ ಆಂದೋಲನದ ಸ್ವೀಕಾರವನ್ನು ಹೆಚ್ಚಿಸಲು, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಬೇಕು. ಪಾರದರ್ಶಕ ವ್ಯವಸ್ಥೆಯಿಂದ ಮಾತ್ರ ದೇಶದ ಕೋಟ್ಯಂತರ ಜನರನ್ನು ಸಂಪರ್ಕಿಸಲು ಸಾಧ್ಯ ಎಂದು ಕೇಂದ್ರ ಗೃಹ ಅಗೂ ಸಹಕಾರಿ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದ ಪುಣೆಯಲ್ಲಿ ಕೇಂದ್ರೀಯ ಸಹಕಾರ ಸಂಘಗಳ ರಿಜಿಸ್ಟ್ರಾರ್ (ಸಿಆರ್ಸಿಎಸ್) ಕಚೇರಿಯ ಡಿಜಿಟಲ್ ಪೋರ್ಟಲ್ಅನ್ನು ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ‘ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವಿಲ್ಲದೆ ಸಹಕಾರಿ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದರು.
ಸಹಕಾರ ಆಂದೋಲನದ ಸ್ವೀಕಾರವನ್ನು ಹೆಚ್ಚಿಸಲು, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಬೇಕು. ಪಾರದರ್ಶಕ ವ್ಯವಸ್ಥೆಯಿಂದ ಮಾತ್ರ ದೇಶದ ಕೋಟ್ಯಂತರ ಜನರನ್ನು ಸಂಪರ್ಕಿಸಲು ಸಾಧ್ಯ. ‘ಬಹು-ರಾಜ್ಯ ಸಹಕಾರಿ ಸಂಘವನ್ನು ನಿರ್ವಹಿಸುವ ಕೇಂದ್ರ ರಿಜಿಸ್ಟ್ರಾರ್ ಕಚೇರಿಯ ಕಾರ್ಯಗಳು ಸಂಪೂರ್ಣ ಡಿಜಿಟಲ್ ಆಗುತ್ತಿವೆ, ಇದು ಸಹಕಾರಿ ಕ್ಷೇತ್ರದ ವ್ಯಾಪಾರಗಳನ್ನು ಸುಲಭಗೊಳಿಸಲಿದೆ. ಸಹಕಾರ ಸಂಘಗಳ ಹೊಸ ಶಾಖೆ ತೆರೆಯುವುದು, ಬೇರೆ ರಾಜ್ಯಕ್ಕೆ ವಿಸ್ತರಿಸುವುದು ಅಥವಾ ಲೆಕ್ಕಪರಿಶೋಧನೆ ನಡೆಸುವುದು ಮುಂತಾದ ಎಲ್ಲಾ ಕೆಲಸಗಳು ಈಗ ಆನ್ಲೈನ್ ಆಗಲಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಮಾರ್ಗದರ್ಶನದಲ್ಲಿ ಸಹಕಾರ ಸಚಿವಾಲಯವು ಸಹಕಾರದಿಂದ ಸಮೃದ್ಧಿಯೆಂಬ ಮಂತ್ರವನ್ನು ಸಾಕಾರಗೊಳಿಸಲು ಮತ್ತು ಸಹಕಾರ ಚಳುವಳಿಯನ್ನು ಬಲಪಡಿಸಲು ದೇಶಾದ್ಯಂತ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಎಂದರು.
ಸಹಕಾರಿ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಉತ್ತೇಜಿಸಲು, ಬಹು-ರಾಜ್ಯ ಸಹಕಾರಿ ಸಂಘಗಳ ಕೇಂದ್ರೀಯ ರಿಜಿಸ್ಟ್ರಾರ್ ಕಚೇರಿಯನ್ನು ಗಣಕೀಕರಣಗೊಳಿಸಲು ಗಮನಾರ್ಹ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ ಎಂದ ಅವರು, ಸಂಪೂರ್ಣ ಕಾಗದ ರಹಿತ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು, ಸಾಫ್ಟ್ವೇರ್ ಮೂಲಕ ಮಲ್ಟಿ-ಸ್ಟೇಟ್ ಕೋ-ಆಪರೇಟಿವ್ ಸೊಸೈಟಿಗಳ ಕಾಯಿದೆ ಮತ್ತು ನಿಯಮಗಳ ಸ್ವಯಂಚಾಲಿತ ಅನುಸರಣೆಯನ್ನು ಖಚಿತಪಡಿಸುವುದು, ವ್ಯವಹಾರವನ್ನು ಸುಗಮಗೊಳಿಸುವುದು, ಡಿಜಿಟಲ್ ಸಂವಹನವನ್ನು ಸಕ್ರಿಯಗೊಳಿಸುವುದು, ಪಾರದರ್ಶಕತೆಯನ್ನು ಖಾತರಿಪಡಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶಗಳು ಎಂದು ಮಾಹಿತಿ ನೀಡಿದರು.
ದೇಶದ ಎಲ್ಲಾ ರಾಜ್ಯಗಳ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಗಳನ್ನು ಗಣಕೀಕರಣಗೊಳಿಸಲು ಮಾತುಕತೆ ನಡೆಯುತ್ತಿದೆ, ಇದು ದೇಶಾದ್ಯಂತ 8 ಲಕ್ಷ ಸಹಕಾರ ಸಂಘಗಳೊಂದಿಗೆ ಸಂವಹನವನ್ನು ಸುಲಭಗೊಳಿಸುತ್ತದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಶಾರವರ ದೂರದೃಷ್ಟಿಯ ಚಿಂತನೆಯ ಮೂಲಕ PACS ಮೂಲಕ ಪ್ರತಿ ಹಳ್ಳಿಗೆ ಸಹಕಾರ ಚಳುವಳಿಯನ್ನು ಕೊಂಡೊಯ್ಯುವ ಕೆಲಸ ವೇಗವಾಗಿ ನಡೆಯುತ್ತಿರುದಕ್ಕೆ ಇದಕ್ಕೆ ಸಾಕ್ಷಿ.
ಮಹಾರಾಷ್ಟ್ರದ ಪುಣೆಯಲ್ಲಿರುವ ಸಹಕಾರ ಸಂಘಗಳ ಕೇಂದ್ರೀಯ ರಿಜಿಸ್ಟ್ರಾರ್ ಕಚೇರಿಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದ್ದು, ಮಹಾರಾಷ್ಟ್ರದ ಸಹಕಾರಿ ಸಂಸ್ಕೃತಿ ಇಡೀ ದೇಶಕ್ಕೆ ಮಾದರಿ ಎಂದು ಬಣ್ಣಿಸಿದರು.
ಕಳೆದ 9 ವರ್ಷಗಳಲ್ಲಿ ಸಹಕಾರಿ ಕ್ಷೇತ್ರ ಪುನಶ್ಚೇತನಗೊಂಡಿದೆ. ದೇಶದ ಮೊದಲ ಸಹಕಾರಿ ಸಚಿವ ಶಾ ಅವರು ಸಹಕಾರಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ಕೆಲಸ ಮಾಡಿದ್ದಾರೆ. ಇಂದು, ಒಬ್ಬ ಬಡ ವ್ಯಕ್ತಿಗೆ ಉದ್ಯಮಕ್ಕೆ ಬಂಡವಾಳದ ಕೊರತೆಯಿದ್ದರೆ, ಅವನಿಗೆ ಸಹಕಾರ ಚಳುವಳಿಯೇ ಉತ್ತಮ ಮಾರ್ಗವಾಗಿದೆ, ಇದರ ಮೂಲಕ ಸಣ್ಣ ಬಂಡವಾಳ ಹೊಂದಿರುವ ಅನೇಕ ಜನರು ಒಟ್ಟಾಗಿ ದೊಡ್ಡ ಉದ್ಯಮವನ್ನು ಸ್ಥಾಪಿಸಬಹುದು. ಭಾರತವು ಅಮುಲ್, ಇಫ್ಕೋ ಮತ್ತು ಕ್ರಿಫ್ಕೋ ಮುಂತಾದ ಸಹಕಾರಿ ಸಂಸ್ಥೆಗಳ ಅನೇಕ ಯಶಸ್ಸಿನ ಕಥೆಗಳನ್ನು ಪ್ರಪಂಚದ ಮುಂದೆ ತೆರೆದಿಟ್ಟಿದೆ.