ಹೈಕೋರ್ಟ್ ಜಡ್ಜ್ ಮೂಲಕ ದುರ್ಘಟನೆಯ ತನಿಖೆ ನಡೆಸಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

RELATED POSTS

ಬೆಂಗಳೂರು(www.thenewzmirror.com): ಆರ್‍ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ದುರ್ಘಟನೆ ತನಿಖೆಯನ್ನು ಮ್ಯಾಜಿಸ್ಟ್ರಿಯಲ್ ತನಿಖೆಗೆ ಸರ್ಕಾರ ವಹಿಸಿ ಬೆಂಗಳೂರಿ ಜಿಲ್ಲಾಧಿಕಾರಿಗೆ ತನಿಖೆಯ ಹೊಣೆ ನೀಡಲಾಗಿದೆ,‌ಬೆಂಗಳೂರಿನ ಡಿ.ಸಿ. ಎಂದರೆ ಅವರು ಬೆಂಗಳೂರಿನ ಇನ್ ಚಾರ್ಜ್ ಅಧಿಕಾರಿ. ಅವರಿಂದ ಯಾವುದೇ ತನಿಖೆ ಮಾಡಲು ಆಗದು. ಹಾಗಾಗಿ ಹೈಕೋರ್ಟಿನ ಕಾರ್ಯನಿರತ ಜಡ್ಜ್ ಮೂಲಕ ದುರ್ಘಟನೆಯ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

ಇಂದು ಬೌರಿಂಗ್ ಆಸ್ಪತ್ರೆಗೆ  ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಕೊಲೆಗಡುಕ ಸರಕಾರವಾಗಿದೆ. ಗುಜರಾತಿನ ಸ್ಟೇಡಿಯಂನಲ್ಲಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ 5 ಲಕ್ಷ ಜನರು ಸೇರಿದ್ದರು. ಏನೂ ಆಗಲಿಲ್ಲ; ಕರ್ನಾಟಕದಲ್ಲೂ ಇಂಥ ದೊಡ್ಡ ಕಾರ್ಯಕ್ರಮಗಳಾಗಿದ್ದರೂ ಆಗ ಏನೂ ಆಗಿರಲಿಲ್ಲ ಎಂದು ಗಮನ ಸೆಳೆದರು.

ಅಲ್ಲು ಅರ್ಜುನ್ ಅವರ ಚಲನಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಒಬ್ಬರು ಮೃತಪಟ್ಟಾಗ ಅಲ್ಲಿನ ಸರಕಾರ ಅಲ್ಲು ಅರ್ಜುನ್ ಅವರನ್ನು ಮನೆಯಿಂದ ಎಳೆದುಕೊಂಡು ಬಂದಿತ್ತು. ನೀವು ಯಾರನ್ನು ಎಳೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸಿದರು. ಉಪ ಮುಖ್ಯಮಂತ್ರಿಗಳು ಕಪ್ ಎತ್ತಿಕೊಂಡು ಚುಂಬಿಸಿಕೊಂಡು ಓಡಾಡುವ ಅಗತ್ಯ ಏನಿತ್ತು ಎಂದು ಕೇಳಿದರು.

ಬೆಂಗಳೂರಿನ ಡಿ.ಸಿ. ಎಂದರೆ ಅವರು ಬೆಂಗಳೂರಿನ ಇನ್ ಚಾರ್ಜ್ ಅಧಿಕಾರಿ. ಅವರಿಂದ ಯಾವುದೇ ತನಿಖೆ ಮಾಡಲು ಆಗದು. ಇದೊಂದು ಮೋಸದ ಕ್ರಮ ಎಂದು ಆಕ್ಷೇಪಿಸಿದರು. ಹೈಕೋರ್ಟಿನ ಕಾರ್ಯನಿರತ ಜಡ್ಜ್ ಮೂಲಕ ದುರ್ಘಟನೆಯ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಜನರ ಪ್ರಾಣಕ್ಕೆ ಯಾರು ರಕ್ಷಕರಿದ್ದರು? ಎಂದ ಅವರು, ಆನ್‍ಲೈನ್ ಪಾಸ್ ನೀಡಿ ಬಳಿಕ ಅವನ್ನು ರದ್ದು ಮಾಡಿದ್ದರು. ಚಿನ್ನಸ್ವಾಮಿ ಸ್ಟೇಡಿಯಂ ಗೇಟನ್ನು ಮೊದಲೇ ತೆರೆದಿದ್ದರೆ ಇವರ್ಯಾರೂ ಸಾಯುತ್ತಿರಲಿಲ್ಲ ಎಂದು ತಿಳಿಸಿದರು. ಸಚಿವರ ಮಕ್ಕಳ ಒತ್ತಡಕ್ಕೆ ಈ ವಿಜಯೋತ್ಸವ ಆಚರಿಸಲಾಯಿತೇ ಎಂದು ಅವರು ಕೇಳಿದರು.

ಆರ್.ಸಿ.ಬಿ. ಗೆಲುವಿನ ವಿಜಯೋತ್ಸವವು ಕ್ರಿಮಿನಲ್ ಕ್ರಮವಾಗಿದ್ದು, ಕಾಲ್ತುಳಿತದ ದುರಂತ, 11 ಜನರ ಸಾವಿಗೆ ಸಂಬಂಧಿಸಿದಂತೆ ಈ ರಾಜ್ಯ ಸರಕಾರವೇ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist