ಬೆಂಗಳೂರು,(www.thenewzmirror.com):
ಸದ್ಯ ಇದೀಗ ಎಲ್ಲೆಲ್ಲೂ ಒಮಿಕ್ರಾನ್ ಭೂತದ ಅರ್ಭಟ. ನಾವು ಸೇಪ್ ಅನ್ನುವಾಗ್ಲೇ ರಾಜ್ಯದಲ್ಲಿಯೇ ಎರಡು ಹೊಸ ರೂಪಾಂತರಿ ತಳಿ ಬೆಳಕಿಗೆ ಬಂದಿದ್ದು ಜನರ ಅತಂಕಕ್ಕೆ ಕಾರಣವಾಗಿದೆ. ಹೀಗಾಗಿ ಆರಂಭದಲ್ಲಿಯೇ ವೈರಸ್ ಹೊಡೆದೊಡಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ವೈರಸ್ ವಿರುದ್ದ ಹೋರಾಡಲು ಸಕಲ ಸಿದ್ದತೆ ಮಾಡಿಕೊಳ್ಳಲು ಬೊಮ್ಮಯಿ ಇಂದು ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಹೈವೋಲ್ಟೇಜ್ ಮಿಟೀಂಗ್ ನಡೆಸಿದ್ರು.
ಒಮಿಕ್ರಾನ್ ಎಂಟ್ರಿಯಿಂದ ಬೆಚ್ಚಿಬಿದ್ದಿರೋ ರಾಜ್ಯಸರ್ಕಾರ ಇದೀಗ ಮತ್ತೆ ಕಠಿಣ ಕ್ರಮಗಳ ಜಾರಿಗೆ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಂದು ಮಹತ್ವದ ಸಭೆ ನಡೆಸಿ ಹಲಸು ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ..
ಸರ್ಕಾರದ ಮಾರ್ಗಸೂಚಿ ಏನು..?
- ಥಿಯೇಟರ್, ಮಾಲ್ ಪ್ರವೇಶಕ್ಕೆ ವ್ಯಾಕ್ಸಿನ್ ಸರ್ಟಿಫಿಕೇಟ್ ಕಡ್ಡಾಯ
- 18 ವರ್ಷದೊಳಗಿನ ಮಕ್ಕಳ ಪೋಷಕರಿಗೆ 2 ಡೋಸ್ ಕಡ್ಡಾಯ
- ಡಿ.15ರವರೆಗೂ ಶಾಲಾ,ಕಾಲೇಜುಗಳಲ್ಲಿ ಕಾರ್ಯಕ್ರಮಗಳಿಗೆ ಬ್ರೇಕ್
- ಮದುವೆ ಹಾಗೂ ಸಭೆ ಸಮಾರಂಭಗಳಲ್ಲಿ 500 ಜನಕ್ಕೆ ಮಾತ್ರ ಅವಕಾಶ
- ವಿಮಾನ ನಿಲ್ದಾಣಗಳಲ್ಲಿ RTPCR ಟೆಸ್ಟಿಂಗ್ ಕಡ್ಡಾಯ
- ಏರ್ಪೋರ್ಟ್ಗಳಲ್ಲಿ RT-PCR ಟೆಸ್ಟ್ ಕಡ್ಡಾಯ
- ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ವರದಿ ಇದ್ದರಷ್ಟೇ ಎಂಟ್ರಿ
- ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ
- ಬೆಡ್ಗಳನ್ನು ಮತ್ತೆ ಸಿದ್ಧಪಡಿಸಿಕೊಳ್ಳುವಂತೆ ಸೂಚನೆ
- ಆಕ್ಸಿಜನ್ ಪ್ಲ್ಯಾಂಟ್ಗಳನ್ನು ಸಿದ್ಧಪಡಿಸಿಕೊಳ್ಳಲು ಸೂಚನೆ
- ಪ್ರತಿನಿತ್ಯ ಕೋವಿಡ್ ಪರೀಕ್ಷೆ 1 ಲಕ್ಷಕ್ಕೆ ಹೆಚ್ಚಳ
- ಬೆಳಗಾವಿಯಲ್ಲೇ ವಿಧಾನಮಂಡಲ ಅಧಿವೇಶನ
ಮಾಸ್ಕ್ ಹಾಕದಿದ್ರೆ ದಂಡ
- ಮಹಾನಗರ ಪಾಲಿಕೆ ವ್ಯಾಪ್ತಿ 250 ರೂ. ದಂಡ
- ಗ್ರಾಮೀಣ ಪ್ರದೇಶ 100 ರೂಪಾಯಿ ದಂಡ
- ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಕೇಸ್