Sunday, December 10, 2023
  • Login
The Newz Mirror
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
The Newz Mirror
No Result
View All Result
  TRENDING
ಲೀಲಾವತಿ ಅಮ್ಮನ ದರ್ಶನ ಪಡೆದ ಸೊಸೆ ಹಾಗೂ  ಮೊಮ್ಮಗ December 9, 2023
ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ ಅನಿಮಲ್..! December 9, 2023
ನಮ್ಮ ಜಾತ್ರೆ ಕಾರ್ಯಕ್ರಮ ಭಾನುವಾರಕ್ಕೆ ಮುಂದೂಡಿಕೆ December 9, 2023
ಹಿರಿಯ ನಟಿ ಲೀಲಾವತಿ ನಿಧನ; ಇಲ್ಲಿದೆ ನಟಿ ಲೀಲಾವತಿಯ ಸಿನೆಮಾ ಜರ್ನಿ. December 8, 2023
ಶಿಕ್ಷಕರು ಮತ್ತು ಮಕ್ಕಳ ಜೊತೆಯಲ್ಲಿ ಚೆಲ್ಲಾಟ ಆಡ್ತಾ ಇದ್ಯಾ ಬಿಬಿಎಂಪಿ..!? December 8, 2023
Next
Prev
October 23, 2022
editorbyeditor

ಶಾಲೆ ನಡೆಸಲು ಸಾಧ್ಯವಾಗದ ಸರ್ಕಾರ ಜಾಹೀರಾತಿಗೆ ಖರ್ಚು ಮಾಡಿದ್ದು 4.5 ಕೋಟಿ..!

ಶಾಲೆ ನಡೆಸಲು ಸಾಧ್ಯವಾಗದ ಸರ್ಕಾರ ಜಾಹೀರಾತಿಗೆ ಖರ್ಚು ಮಾಡಿದ್ದು 4.5 ಕೋಟಿ..!
0
SHARES
223
VIEWS
Share on WhatsAppShare on TwitterShare on Facebook

ಬೆಂಗಳೂರು,(www.thenewzmirror.com):

ಸರ್ಕಾರಿ ಶಾಲೆಗಳನ್ನ ನಡೆಸೋ ವಿಚಾರದಲ್ಲಿ ಜನತೆಯಿಂದ ಛೀಮಾರಿ ಹಾಕಿಸಿಕೊಂಡ ಸರ್ಕಾರ ಮತ್ತೊಮ್ಮೆ ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ.

RELATED POSTS

ಲೀಲಾವತಿ ಅಮ್ಮನ ದರ್ಶನ ಪಡೆದ ಸೊಸೆ ಹಾಗೂ  ಮೊಮ್ಮಗ

ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ ಅನಿಮಲ್..!

ಭ್ರಷ್ಟಾಚಾರ, ದುರಾಡಳಿತ, ಅಕ್ರಮ, ಪೊಲೀಸ್ ದೌರ್ಜನ್ಯದ ನಡುವೆ ಇದೀಗ ಮತ್ತೊಂದು ವಿವಾದಕ್ಕೂ ಕಾರಣವಾಗಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ರೂ ಜುಟ್ಟಿಗೆ ಮಲ್ಲಿಗೆ ಹೂ ಅನ್ನುವಂತೆ ಜಾಹೀರಾತಿಗಾಗಿ ಬರೋಬ್ಬರಿ ನಾಲ್ಕೂವರೆ ಕೋಟಿ ಖರ್ಚು ಮಾಡಿದೆ.

ನವೆಂಬರ್ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕಾಗಿ (GIM) ಕಿರುಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಐದು ನಿಮಿಷಗಳ ಕಿರುಚಿತ್ರ ನಿರ್ಮಾಣಕ್ಕಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ನಾಲ್ಕುವರೆ (4.5) ಕೋಟಿ ರೂಪಾಯಿಗಳನ್ನು ಪಾವತಿಸಲು ಒಪ್ಪಂದ ಮಾಡಿಕೊಂಡಿದೆ.

ಈಗಾಗಲೇ ಈ ಸಂಸ್ಥೆಗೆ ಒಂದುವರೆ (1.5) ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಾಗಿದೆ ಎಂದು ತಿಳಿದುಬಂದಿದೆ. ಈ ವಿಚಾರದ ಬಗ್ಗೆ ಸ್ವತಃ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ್ ನಿರಾಣಿ ತಮ್ಮ  ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಈ  ಒಪ್ಪಂದ ರದ್ದುಪಡಿಸಲು ಸೂಚಿಸಿದ್ದಾರೆ.

ಸಚಿವರ ಈ ಟಿಪ್ಪಣಿ ಗಮನಿಸಿದರೆ ಹಲವಾರು ಅನುಮಾನಗಳು ಮೂಡುತ್ತವೆ. ಟಿಪ್ಪಣಿಯಲ್ಲಿ ಸಚಿವರು ಹೇಳಿರುವಂತೆ, ಈ ಕಿರುಚಿತ್ರಕ್ಕಾಗಿ ಮಾಡಿಕೊಂಡಿರುವ ಒಪ್ಪಂದವು ಅವರ ಗಮನಕ್ಕೆ ಬಂದಿರುವುದಿಲ್ಲ ಎಂದು ತಿಳಿದುಬರುತ್ತದೆ. ಇಲಾಖಾ ಸಚಿವರ ಗಮನಕ್ಕೆ ಬಾರದೇ ನಾಲ್ಕೂವರೆ ಕೋಟಿ ತೆರಿಗೆ ಹಣ ಖರ್ಚು ಮಾಡಿದ್ದಾರೆ ಅಂತ ಯಾರಾದ್ರೂ ನಂಬ್ತಾರಾ ಹೇಳಿ..?

ಇಲಾಖೆಯಲ್ಲಿ ಈ ಪ್ರಮಾಣದ ಹಣವನ್ನು ಯಾವ ಬಾಬ್ತಿಗೆ ಖರ್ಚು ಮಾಡಲಾಗುತ್ತಿದೆ ಎಂದು ಸಚಿವರಿಗೆ ತಿಳಿದಿಲ್ಲವೆಂದರೆ, ಅವರಿಗೆ ತಮ್ಮ ಇಲಾಖೆ ಮೇಲೆ ನಿಯಂತ್ರಣವಿಲ್ಲವೆನ್ನುವುದು ಸ್ಪಷ್ಟವಾಗಿ ತಿಳಿಯುತ್ತೆ.

 ಪ್ರತಿ ಬಾರಿಯೂ ಕೆಟಿಟಿಪಿ ಕಾಯ್ದೆ ಉಲ್ಲಂಘನೆ ಮಾಡುತ್ತಿದೆ. ಎಲ್ಲಾ  ಖರೀದಿಗಳಿಗೂ ಮತ್ತು ಗುತ್ತಿಗೆ  ನೀಡಲು ಕೆಟಿಟಿಪಿ  ಕಾಯ್ದೆಯಿಂದ  ವಿನಾಯಿತಿ  ಪಡೆಯುವುದಾದರೆ, ಆ ಕಾಯ್ದೆ ಯ ಅಗತ್ಯ ವಿದ್ಯಾ ಅನ್ನೋ ಪ್ರಶ್ನೆ ಮೂಡುತ್ತಿದೆ.

ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಮೆಗಾ ಚಿತ್ರಗಳನ್ನ ನಿರ್ಮಿಸಿದ ನಿರ್ಮಾಪಕ ಮತ್ತು ಅವರ ಸಂಬಂಧಿಯೊಬ್ಬರು ಇದೇ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಈ ವಿಚಾರ ಅವರ ಗಮನಕ್ಕೆ ಬಂದಿತ್ತೊ ಇಲ್ಲವೊ ತಿಳಿದಿಲ್ಲ, ತಿಳಿದಿದ್ದರೆ, ಅವರೂ ಕೂಡ ಆಶ್ಚರ್ಯ ಪಡುತ್ತಿದ್ದರೆನೋ..?
ಜಾಗತಿಕ ಹೂಡಿಕೆದಾರರ ಸಮಾವೇಶವಾಗಿರುವುದರಿಂದ ಇದನ್ನ ಹಾಲಿವುಡ್ ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರಬಹುದೆನೋ ಅನ್ನೋ ಮಾತುಗಳು ಹಾಲಿವುಡ್ ವಲಯದಲ್ಲಿ ಚರ್ಚೆಯಾಗ್ತಿದೆಯಂತೆ.

ಒಂದೆಡೆ ಹಣವಿಲ್ಲ ಎಂದು ಹೇಳುವ ಸರ್ಕಾರ ಮತ್ತೊಂದೆಡೆ, ಈ ರೀತಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ನೆರವಾಗುತ್ತಿದೆ. ಯಾವ ಜನಕಲ್ಯಾಣ ಸಾಧನೆಯೂ ಇಲ್ಲದ ಸರ್ಕಾರ, ತನ್ನನ್ನು ಬಿಂಬಿಸಿಕೊಳ್ಳಲು ಪ್ರತಿನಿತ್ಯ ಜಾಹಿರಾತು ನೀಡಿ ಹತ್ತಾರು ಕೋಟಿ ಹಣ ಅಪವ್ಯಯ ಮಾಡುತ್ತಿದೆ.

ಶಾಲೆಗಳ ನಿರ್ವಹಣೆಗೆ, ಪಠ್ಯ ಪುಸ್ತಕ, ಸಮವಸ್ತ್ರ, ಶೂ/ ಕಾಲುಚೀಲ ಒದಗಿಸಲು ಹಣದ ಮುಗ್ಗಟ್ಟು ಎಂದು ಹೇಳಿ ಪೋಷಕರಿಂದ ಮತ್ತು ದಾನಿಗಳಿಂದ ದೇಣಿಗೆ ಸಂಗ್ರಹಿಸಲು ಮುಂದಾಗುತ್ತದೆ.

 
ಸಚಿವರು ಜಿಮ್ ಸಮಾವೇಶಕ್ಕೆ ವ್ಯಯಿಸುತ್ತಿರುವ ಹಣವನ್ನು ಗಮನಿಸಿದರೆ, ಪ್ರತಿಯೊಂದರಲ್ಲೂ ಇದೇ ರೀತಿಯ ಲೂಟಿ ಕಂಡುಬರುತ್ತದೆ, ಆದ್ದರಿಂದ ಬಹುತೇಕ ಲೂಟಿ ಮಾಡಲು ಮತ್ತು ಜನರನ್ನು ನಂಬಿಸಲು ನಡೆಸುವ ಜಿಮ್ ಎಂಬ ನಾಟಕವನ್ನು ರದ್ದುಗೊಳಿಸುವುದೇ ಒಳಿತು ಎಂದು ಕೆ. ಆರ್. ಎಸ್. ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್ ಅಭಿಪ್ರಾಯ ಪಡ್ತಿದ್ದಾರೆ.

ಈ ಕಿರುಚಿತ್ರ ನಿರ್ಮಾಣದ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಇದಕ್ಕೆ ಕಾರಣರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಇಲ್ಲಿಯವರೆಗೆ ನಡೆಸಲಾಗಿರುವ ಜಿಮ್‍ ಸಮಾವೇಶಕ್ಕಾಗಿ ಮಾಡಿರುವ ಖರ್ಚು ವೆಚ್ಚಗಳನ್ನು, ಅದರಿಂದ ಆಗಿರುವ ಪ್ರಯೋಜನಗಳ ಬಗ್ಗೆ ತನಿಖೆ ನಡೆಸಿ, ಜನರ ಮುಂದೆ ಇಡಬೇಕು ಎಂದೂ  ಕೆ.ಆರ್.ಎಸ್ ಪಕ್ಷ ಆಗ್ರಹ ಪಡಿಸ್ತಿದೆ.

Tags: #bangalore#bjp#bmtc#murugesg Nirani#police#Ramana Reddy#rss#school#sriramulu#thenewzmirrorBangalorebbmpGIMInvestermeetmurugeshRamanaReddyschoolthenewzmirror
Join Our Whatsapp Group

Read More

ಲೀಲಾವತಿ ಅಮ್ಮನ ದರ್ಶನ ಪಡೆದ ಸೊಸೆ ಹಾಗೂ  ಮೊಮ್ಮಗ

December 9, 2023 No Comments
Read More »

ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ ಅನಿಮಲ್..!

December 9, 2023 No Comments
Read More »

ಹಿರಿಯ ನಟಿ ಲೀಲಾವತಿ ನಿಧನ; ಇಲ್ಲಿದೆ ನಟಿ ಲೀಲಾವತಿಯ ಸಿನೆಮಾ ಜರ್ನಿ.

December 8, 2023 No Comments
Read More »

ಶಿಕ್ಷಕರು ಮತ್ತು ಮಕ್ಕಳ ಜೊತೆಯಲ್ಲಿ ಚೆಲ್ಲಾಟ ಆಡ್ತಾ ಇದ್ಯಾ ಬಿಬಿಎಂಪಿ..!?

December 8, 2023 No Comments
Read More »

Exclusive News | ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೇ ಮಾಯವಾಗಿರೋ ಅರಣ್ಯ ಭೂಮಿ ಎಷ್ಟು ಗೊತ್ತಾ.?

December 8, 2023 No Comments
Read More »

Leave a Reply Cancel reply

Your email address will not be published. Required fields are marked *

Next Post
ಗೋಮುಖ ವ್ಯಾಘ್ರ ಸೋಮಣ್ಣ ರಾಜೀನಾಮೆ ನೀಡಲಿ; ಆಪ್ ಆಗ್ರಹ

ಗೋಮುಖ ವ್ಯಾಘ್ರ ಸೋಮಣ್ಣ ರಾಜೀನಾಮೆ ನೀಡಲಿ; ಆಪ್ ಆಗ್ರಹ

2022 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

2022 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

The Newz Mirror

  • The Newz Mirror

© 2021 The Newz Mirror - Copy Right Reserved The Newz Mirror.

No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ

© 2021 The Newz Mirror - Copy Right Reserved The Newz Mirror.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In