ಬೆಂಗಳೂರು(www.thenewzmirror.com): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು “ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ- ದೇವರಾಯನದುರ್ಗ-ಗೊರವನಹಳ್ಳಿ ವಿಧುರಾಶ್ವಥ ಘಾಟಿ ಸುಬ್ರಹ್ಮಣ್ಯ” ಮಾರ್ಗದಲ್ಲಿ ಪ್ಯಾಕೇಜ್ ಟೂರ್ ಆರಂಭಿಸಿದ್ದು, ಸಿಲಿಕಾನ್ ಸಿಟಿಯ ಸುತ್ತಮುತ್ತವಿರುವ ಧಾರ್ಮಿಕ ಕ್ಷೇತ್ರಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.
ಒನ್ ಡೇ ಪಿಕ್ ನಿಕ್ ಕಂ ಟೂರ್ ಮಾದರಿಯಲ್ಲಿ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ಕೆಎಸ್ಆರ್ಟಿಸಿ ಅವಕಾಶ ಕಲ್ಪಿಸುತ್ತಿದೆ,ಜುಲೈ 26 ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು-ಶಿವಗಂಗೆ- ಸಿದ್ದಗಂಗಾ ಮಠ-ದೇವರಾಯನಮರ್ಗ-ಗೊರವನಹಳ್ಳಿ- ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಮಾರ್ಗದಲ್ಲಿ ಪ್ಯಾಕೇಜ್ ಟೂರ್ ಆರಂಭಿಸುತ್ತಿದೆ.
ಅಶ್ವಮೇಧ ಕ್ಲಾಸಿಕ್ ಬಸ್ ನಲ್ಲಿ ವಾರಾಂತ್ಯದ ದಿನಗಳಲ್ಲಿ (ಪ್ರತಿ ಶನಿವಾರ ಮತ್ತು ಭಾನುವಾರ) ಪ್ಯಾಕೇಜ್ ಟೂರನ್ನು (ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ)ಪ್ರಾರಂಭಿಸುತ್ತಿದ್ದು,ವೀಕೆಂಡ್ ಟ್ರಿಪ್ ಗೆ ಉತ್ತಮ ಅವಕಾಶ ಕಲ್ಪಿಸಿದೆ.
ವೇಳಾಪಟ್ಟಿ ಮತ್ತು ದರದ ವಿವರ:








