ತುಮಕೂರು(www.thenewzmirror.com):ಖಾತೆ ಬದಲಾವಣೆಯ ಕುರಿತಂತೆ ನಾನು ಯಾರ ಬಳಿಯೂ ಮಾತನಾಡೇ ಇಲ್ಲ. ಇದೆಲ್ಲ ಸತ್ಯಕ್ಕೆ ದೂರವಾದದ್ದು. ವಿರೋಧ ಪಕ್ಷದವರು ಹಬ್ಬಿಸುತ್ತಿರುವ ವದಂತಿಯಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಖಾತೆ ಬದಲಾಯಿಸುವಂತೆ ನಾನು ಮುಖ್ಯಮಂತ್ರಿಯವರನ್ನು ಕೇಳಿದ್ದೇನೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತದೆ. ನಾನು ಯಾವತ್ತು ಕೂಡ ನಿರ್ಧಿಷ್ಟವಾಗಿ ಇಂತಹ ಖಾತೆ ಬೇಕು ಎಂದು ಮುಖ್ಯಮಂತ್ರಿಯವರನ್ನು ಕೇಳಿಲ್ಲ.
‘ಗೃಹ ಖಾತೆ ಬದಲಾವಣೆ ಕುರಿತು ಪರಮೇಶ್ವರ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿಯವರ ಬಳಿ ಕೇಳಿಕೊಂಡರು. ಮುಖ್ಯಮಂತ್ರಿಯವರು ಸುಮ್ಮನೆ ಇರಿ ಎಂದು ಪರಮೇಶ್ವರ್ ಅವರಿಗೆ ಹೇಳಿದರು’ ಎಂದೆಲ್ಲ ಸುದ್ದಿ ಮಾಡಲಾಗಿದೆ. ಇದೆಲ್ಲ ತಪ್ಪು ಮಾಹಿತಿಯಿಂದ ಕೂಡಿದ ಸುದ್ದಿಯಾಗಿರುತ್ತದೆ ಎಂದಿದ್ದಾರೆ.
ಖಾತೆ ಬದಲಾವಣೆಯ ಕುರಿತಂತೆ ನಾನು ಯಾರ ಬಳಿಯೂ ಮಾತನಾಡೇ ಇಲ್ಲ. ಇದೆಲ್ಲ ಸತ್ಯಕ್ಕೆ ದೂರವಾದದ್ದು. ವಿರೋಧ ಪಕ್ಷದವರು ಹಬ್ಬಿಸುತ್ತಿರುವ ವದಂತಿಯಾಗಿದೆ. ಈ ವಿಚಾರವನ್ನು ಯಾರು ಕೂಡ ಗಣನೆಗೆ ತೆಗೆದುಕೊಳ್ಳಬಾರದು ಎಂಬುದು ನನ್ನ ಮನವಿ ಎಂದಿದ್ದಾರೆ.