ವರ್ಷವಿಡೀ ಚುನಾವಣೆ ಮಾಡುತ್ತಾ ಕೂರಲು ಸಾಧ್ಯವಿಲ್ಲ: ಒನ್ ನೇಷನ್ ಒನ್ ಎಲೆಕ್ಷನ್ ಸಮರ್ಥಿಸಿಕೊಂಡ ಪ್ರಲ್ಹಾದ್ ಜೋಶಿ

RELATED POSTS

ಕಲಬುರ್ಗಿ(www.thenewzmirror.com):2060ರವರೆಗೂ ಭಾರತವು ಜಗತ್ತಿನ ಅತ್ಯಂತ ಯುವರಾಷ್ಟ್ರವಾಗಿ ಇರಲಿದೆ. ಭಾರತವು ಇದರ ಪರಿಣಾಮವಾಗಿ ಉತ್ಪಾದನಾ ಹಬ್ ಆಗಿ ಪರಿವರ್ತನೆಗೊಳ್ಳಲಿದೆ. ಆಗ ನಾವು 12 ತಿಂಗಳೂ ಚುನಾವಣೆ ಮಾಡುತ್ತ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಒಂದು ದೇಶ ಒಂದು ಚುನಾವಣೆ ಪ್ರಸ್ತಾಪವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಮರ್ಥಿಸಿಕೊಂಡರು.

ಕಲಬುರಗಿಯಲ್ಲಿ ಏರ್ಪಡಿಸಿದ್ದ ‘ಒಂದು ದೇಶ ಒಂದು ಚುನಾವಣೆ’ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ದೇಶ ಒಂದು ಚುನಾವಣೆ ಎಂದರೆ ಇವರು ಗಾಬರಿ ಪಡುವ ಅಗತ್ಯವಿಲ್ಲ. 1952ರಲ್ಲಿ ಮೊದಲನೇ ಚುನಾವಣೆ ಆಗಿತ್ತು. 1952, 1957, 1962 ಮತ್ತು 1967- ಹೀಗೆ 4 ಬಾರಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಒಟ್ಟಿಗೆ ನಡೆದಿತ್ತು ಎಂದು ಅವರು ತಿಳಿಸಿದರು.

1967ರ ಬಳಿಕ ರೋಗ ಶುರುವಾಯಿತು. ಕೇರಳದಲ್ಲಿ ನಂಬೂದರಿಪಾಡ್ ಅವರ ಸರಕಾರ ಇತ್ತು. ಆ ಸರಕಾರವನ್ನು ಇವರಿಗೆ ತಡೆದುಕೊಳ್ಳಲಾಗಲಿಲ್ಲ; ಆರ್ಟಿಕಲ್ 356 ಬಳಸಿ ಸರಕಾರವನ್ನೇ ವಜಾ ಮಾಡಿದ್ದರು. 125 ಬಾರಿ ಚುನಾಯಿತ ರಾಜ್ಯ ಸರಕಾರಗಳನ್ನು ಇವರು ವಜಾ (ಬರ್ಖಾಸ್ತು) ಮಾಡಿದ್ದರು. ಕಾಂಗ್ರೆಸ್ ಅವಧಿಯಲ್ಲಿ 90 ರಾಜ್ಯ ಸರಕಾರಗಳನ್ನು ವಜಾ ಮಾಡಿದ್ದರು. ಅದರಲ್ಲಿ 39 ಬಾರಿ ಇಂದಿರಾ ಗಾಂಧಿಯವರು ಸರಕಾರ ವಜಾ ಮಾಡಿದ್ದರು. ಅಸಹಿಷ್ಣುತೆಯೇ ಇದಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದರು.

ಯಾರು ತಮ್ಮ ಮಾತು ಕೇಳುವುದಿಲ್ಲವೋ ಅವರನ್ನು ವಜಾ ಮಾಡಿ, ಕಾಂಗ್ರೆಸ್ ಸರಕಾರ ಅಥವಾ ರಾಷ್ಟ್ರಪತಿ ಆಳ್ವಿಕೆ ವಿಧಿಸುತ್ತಿದ್ದರು. ಈ ಪದ್ಧತಿಯಿಂದ ಇವತ್ತು ಈ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದ ವಿಧಾನಸಭೆಗೆ 2023ರಲ್ಲಿ ಚುನಾವಣೆ ಆಗಿತ್ತು. 2024ರ ಏಪ್ರಿಲ್- ಮೇ ತಿಂಗಳಲ್ಲಿ ಸಂಸತ್ತಿಗೆ ಚುನಾವಣೆ ನಡೆಯಿತು. ಇದಾದ ಬಳಿಕ ಜಾರ್ಖಂಡ್, ಮಹಾರಾಷ್ಟ್ರ, ದೆಹಲಿ, ಒಡಿಶಾ, ಹರಿಯಾಣ ರಾಜ್ಯಗಳ ಚುನಾವಣೆ ನಡೆದಿದೆ. ಜನರಲ್ಲಿ ಏಕಕಾಲದ ಚುನಾವಣೆಯ ಅಪೇಕ್ಷೆ ಇದ್ದರೂ ಮಧ್ಯೆ ಬಂದ ರೋಗದಿಂದ ಸಮಸ್ಯೆ ನಿರ್ಮಾಣವಾಗುತ್ತ ಹೋಗಿದೆ ಎಂದು ತಿಳಿಸಿದರು.

ನಮ್ಮಲ್ಲಿ ಶಕ್ತಿಯುತ ಪ್ರಜಾಪ್ರಭುತ್ವ ಇದೆ. ಪ್ರಜಾಪ್ರಭುತ್ವದ ಮೂಲ ಭಾರತದಲ್ಲಿದೆ. ನೈಸರ್ಗಿಕ ಸಂಪತ್ತು ಸೇರಿ ಸಂಪದ್ಭರಿತ ರಾಷ್ಟ್ರ ನಮ್ಮದು. 2060ರವರೆಗೂ ಭಾರತವು ಜಗತ್ತಿನ ಅತ್ಯಂತ ಯುವರಾಷ್ಟ್ರವಾಗಿ ಇರಲಿದೆ. ಭಾರತವು ಇದರ ಪರಿಣಾಮವಾಗಿ ಉತ್ಪಾದನಾ ಹಬ್ ಆಗಿ ಪರಿವರ್ತನೆಗೊಳ್ಳಲಿದೆ. ಆಗ ನಾವು 12 ತಿಂಗಳೂ ಚುನಾವಣೆ ಮಾಡುತ್ತ ಕುಳಿತುಕೊಳ್ಳಲು ಸಾಧ್ಯವಿಲ್ಲ.ಭಾರತದಲ್ಲಿ ಒನ್ ನೇಷನ್ ಒನ್ ರೇಷನ್ ಕಾರ್ಡ್ ಮಾಡಿದ್ದೇವೆ. ಅವರು ಆಶ್ವಾಸನೆ ಕೊಟ್ಟು ಜಾರಿಗೊಳಿಸದ ಒನ್ ನೇಷನ್ ಒನ್ ರ್ಯಾಂಕ್ ಮಾಡಿದ್ದೇವೆ. ಒನ್ ನೇಷನ್ ಒನ್ ಗ್ರಿಡ್ ಮಾಡಿದ್ದೇವೆ. ವಿದ್ಯುತ್ ಉತ್ಪಾದನೆ, ಸರಬರಾಜಿನಲ್ಲಿ ಸಮಸ್ಯೆ ಇತ್ತು. ಗುಲ್ಬರ್ಗ ಸೇರಿ ದೇಶದ ವಿವಿಧೆಡೆ ವಿದ್ಯುತ್ ಕಡಿತ ಸಾಮಾನ್ಯವಾಗಿತ್ತು. ಒಂದೇ ಗ್ರಿಡ್‍ನಿಂದ ದೇಶದೊಳಗೆ ವಿದ್ಯುತ್ ಕೊರತೆ ಶೇ 0.01ರಷ್ಟಕ್ಕೆ ಇಳಿದಿದೆ ಎಂದು ವಿವರಿಸಿದರು. 

2014ಕ್ಕೆ ಮೊದಲು ಒಮ್ಮೆ ಇಡೀ ಉತ್ತರ ಭಾರತವು 3 ದಿನ ಅಂದರೆ 72 ಗಂಟೆ ಕತ್ತಲೆಯಲ್ಲಿತ್ತು. ಹೆಚ್ಚು ವಿದ್ಯುತ್ ಪಡೆಯಲು ಮುಂದಾದುದರಿಂದ ಸ್ಫೋಟ ಸಂಭವಿಸಿದ್ದೇ ಇದಕ್ಕೆ ಕಾರಣವಾಗಿತ್ತು. 2012ರಲ್ಲಿ ಇದು ನಡೆದಿದ್ದು, ರೈಲುಗಳ ಸಂಚಾರವೂ ಸ್ಥಗಿತವಾಗಿತ್ತು. 1950ರಿಂದ 2014ರವರೆಗೆ 64 ವರ್ಷಗಳಲ್ಲಿ 240 ಗಿಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದ್ದರೆ, 2014ರಿಂದ 2024ರ 440 ಗಿಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇದು ಒನ್ ಗ್ರಿಡ್- ಒನ್ ನೇಷನ್‍ನಿಂದ ಸಾಧ್ಯವಾಗಿದೆ ಎಂದು ತಿಳಿಸಿದರು. ಈಗ ಜಿಪಿಎಸ್ ಮೂಲಕ ಸಮಯ ಪಡೆಯುತ್ತಿದ್ದು, ಭಾರತದ್ದೇ ಆದ ಇಂಡಿಯನ್ ಸ್ಟಾಂಡರ್ಡ್ ಟೈಮ್ ಅನ್ನು ವ್ಯವಸ್ಥೆಗೊಳಿಸುತ್ತಿದ್ದು, ಅದನ್ನು ಶೀಘ್ರವೇ ಉದ್ಘಾಟಿಸುತ್ತೇವೆ ಎಂದು ಪ್ರಕಟಿಸಿದರು.

ಜಗತ್ತಿನೊಳಗೆ ಪ್ರಜಾಪ್ರಭುತ್ವದ ಕಲ್ಪನೆಯು 12ನೇ ಶತಮಾನ, ಅದಕ್ಕಿಂತ ಮೊದಲೇ ಸ್ಪಷ್ಟವಾಗಿತ್ತು. ಕರ್ನಾಟಕದಲ್ಲಿ ಅನುಭವ ಮಂಟಪದ ಮೂಲಕ ಜಗತ್ತಿಗೆ ಮೊದಲ ಸಂಸತ್ತನ್ನು ನೀಡಿದವರು ಸಮಾಜ ಸುಧಾರಕ ಬಸವಣ್ಣನವರು.ನಮ್ಮ ದೇಶ ಜಗತ್ತಿನಲ್ಲೇ ಅತ್ಯಂತ ಪುರಾತನವಾದ ದೇಶ. 5 ಸಾವಿರ ವರ್ಷಗಳ ಹಿಂದಿನ ವಿಷ್ಣು ಪುರಾಣದಲ್ಲೇ ಇದರ ಉಲ್ಲೇಖವಿದೆ. ಜಗತ್ತು ಭಾಷೆಯ ವಿಷಯದಲ್ಲಿ ಶೈಶವಾವಸ್ಥೆಯಲ್ಲಿದ್ದಾಗ ಅತ್ಯುತ್ತಮವಾದ ವ್ಯಾಕರಣಸೂತ್ರವನ್ನು ಇದೇ ಭಾರತವು ನೀಡಿತ್ತು ಎಂದು ನೆನಪಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ಹಿಂದೆ ಏಕಕಾಲಕ್ಕೆ ಚುನಾವಣೆ ನಡೆಯುತ್ತಿತ್ತು. ಕಾರಣಾಂತರದಿಂದ ಅದು ಬದಲಾಯಿತು. ದೇಶದ ಅತ್ಯುತ್ತಮ ಭವಿಷ್ಯದ ದೃಷ್ಟಿಯಿಂದ ಒಂದು ದೇಶ ಒಂದು ಚುನಾವಣೆ ಅತ್ಯಗತ್ಯ ಎಂಬ ಚರ್ಚೆ ಹಲವಾರು ವೇದಿಕೆಗಳಲ್ಲಿ ನಡೆದಿತ್ತು; ಆದರೆ, ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಚುನಾವಣಾ ವೆಚ್ಚವು ಅತ್ಯಂತ ದುಬಾರಿಯಾಗಿದೆ. ಅದೊಂದೇ ಮಾನದಂಡವಲ್ಲ; ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು 2047ನೇ ಇಸವಿಗೆ ವಿಕಸಿತ ರಾಷ್ಟ್ರವಾಗುವ ಪರಿಕಲ್ಪನೆಯನ್ನು ಹೊಂದಿದ್ದಾರೆ. ಇದಕ್ಕಾಗಿ ಎಲ್ಲ ವಿಚಾರಗಳಲ್ಲೂ ಗಮನ ಹರಿಸುವ ಅಗತ್ಯ ಇದೆ ಎಂದು ಹೇಳಿದರು. ವರ್ಷಪೂರ್ತಿ ಚುನಾವಣೆ ನಡೆದಾಗ ನೀತಿ ಸಂಹಿತೆ ಜಾರಿಯಲ್ಲಿದ್ದು, ಆಡಳಿತಕ್ಕೆ ಹೊಡೆತ ಬೀಳುತ್ತದೆ. ನಿರಂತರವಾಗಿ ವಿಭಿನ್ನ ಚುನಾವಣೆಯಿಂದ ನೀತಿ ಸಂಹಿತೆ ರೂಪದಲ್ಲೇ ರಾಜ್ಯಗಳು 2 ವರ್ಷ ಕಳೆಯಬೇಕಾಗುತ್ತದೆ ಎಂದು ವಿವರಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist