KSRTCಯಲ್ಲಿ ಡ್ಯೂಟಿ ರೋಟಾ ಕೌನ್ಸೆಲಿಂಗ್‌ ಹೆಸರಲ್ಲಿ ನಡೀತಿದ್ಯಾ ದಬ್ಬಾಳಿಕೆ.?; ಲಿಖಿತ ದೂರು ಕೊಟ್ರೂ ಎಂಡಿ ಡೋಂಟ್‌ ಕೇರ್‌..!

Allegations of Oppression in KSRTC Duty Rota Counseling; MD Ignores Written Complaint

ಬೆಂಗಳೂರು, (www.thenewzmirror.com);

KSRTC ಯಲ್ಲಿ ನಿಯಮಗಳು ಇರೋದೇ ಉಲ್ಲಂಘನೆ ಮಾಡೋದಿಕ್ಕಾ ಅನ್ನೋ ಪ್ರಶ್ನೆ ಎದ್ದಿದೆ. ಕೇಂದ್ರ ಕಚೇರಿ ಆದೇಶ, ಕೋರ್ಟ್‌ ನಿರ್ದೇಶನ ಇವೆಲ್ಲವೂ ಪಾಲನೆ ಮಾಡೋದು ಅಂದ್ರೆ ಅಧಿಕಾರಿಗಳು ಅಸಡ್ಡೆ ತೋರಿಸುತ್ತಿದ್ದಾರಾ ಎನ್ನುವ ಅನುಮಾನ ಇದೀಗ ಮೂಡುತ್ತಿದೆ. ಶಿವಮೊಗ್ಗ ವಿಭಾಗದಲ್ಲಿ ನಡೆಯುತ್ತಿರೋ ಒಂದಷ್ಟು ಘಟನೆಗಳು ಇದಕ್ಕೆಲಾ ಇಂಬು ನೀಡ್ತಿದ್ದು, ಯಾರಿಗೋ ಫೇವರ್‌ ಮಾಡೋಕೆ ಇನ್ಯಾರಿಗೋ ಅನ್ಯಾಯ ಮಾಡ್ತಿದ್ದಾರೆ ಅನ್ನೋದು thenewzmirrorಗೆ ಸಿಕ್ಕಿರೋ ದಾಖಲೆಗಳು ಸಾರಿ ಸಾರಿ ಹೇಳುತ್ತಿವೆ.

RELATED POSTS

ಮೂಲಗಳ ಪ್ರಕಾರ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಡ್ಯೂಟಿ ರೋಟಾ ಕೌನ್ಸೆಲಿಂಗ್‌ ಜಾರಿಯಲ್ಲಿದೆ. ಸೇವಾ ಹಿರಿತನದ ಆಧಾರದ ಮೇಲೆ ಸಿಬ್ಬಂದಿ ರೂಟ್‌ ಗಳನ್ನ ಆಯ್ಕೆ ಮಾಡುವ ವ್ಯವಸ್ಥೆ ಇದಾಗಿದ್ದು, ಯಾವುದೇ ಗೊಂದಲ ಗೋಜಲು ಇಲ್ದೆ ಮಾರ್ಗಗಳನ್ನ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಕುರಿತಂತೆ ಆಯಾ ಕೇಂದ್ರ ಕಚೇರಿಯಿಂದ 1192ರಲ್ಲಿ ಡ್ಯೂಟಿ ರೋಟಾ ಕೌನ್ಸಿಲಿಂಗ್‌ ಕುರಿತಂತೆ ಸುತ್ತೋಲೆಯನ್ನೂ ಹೊರಡಿಸಲಾಗಿದೆ. ಹೀಗಿದ್ದರೂ ಶಿವಮೊಗ್ಗ ವಿಭಾಗದ ಕೆಲ ಅಧಿಕಾರಿಗಳು ಬಿಡಿಗಾಸಿನ ಆಸೆಗೆ ನಿಯಮವನ್ನೇ ಗಾಳಿಗೆ ತೂರಿ ಕೌನ್ಸಿಲಿಂಗ್‌ ನಡೆಸುತ್ತಿದ್ದಾರಂತೆ. ಮೇಲಿಂದ ಮೇಲೆ ಕೇಂದ್ರ ಕಚೇರಿಯಿಂದ ನೆನಪಿನ ಸುತ್ತೋಲೆಗಳು ಬರ್ತಿದ್ದರೂ ಕೆಲ ಹಣಬಾಕ ಅಧಿಕಾರಿಗಳು ಸೇವಾಹಿರಿತನದ ಸಿಬ್ಬಂದಿಗೆ ಅನ್ಯಾಯ ಮಾಡ್ತಿದ್ದಾರಂತೆ. ತಮ್ಮ ಚಾಕರಿ ಮಾಡುವ ಹಾಗೆನೆ ತಾವ ಹೇಳಿದಂತೆ ಕೇಳುವ ಸಿಬ್ಬಂದಿಗೆ ಇಷ್ಟವಾಗುವ ಮಾರ್ಗಗಳನ್ನ ನೀಡುವ ಕೆಲ್ಸ ಮಾಡ್ತಿದ್ದಾರಂತೆ.

ಹೀಗೆ 2025 ರ ಮಾರ್ಚ್‌ ನಲ್ಲಿ ನಡೆದ ಕೌನ್ಸಿಲಿಂಗ್‌ ನಲ್ಲಿ ಇದೇ ರೀತಿ ಮನಸೋ ಇಚ್ಚೇ ಮಾರ್ಗಗಳನ್ನ ಹಂಚಿಕೆ ಮಾಡಿದ್ದು, ನಿಷ್ಠಾವಂತ ಸಿಬ್ಬಂದಿ ಕಣ್ಣು ಕೆಂಪಾಗಿಸಿದೆ. ಆ ಮೂಲಕ ನಿಯಮಗಳು ಇರುವುದೇ ಉಲ್ಲಂಘನೆ ಮಾಡೋದಿಕ್ಕೆ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಇಲಾಖಾ ಆದೇಶಗಳಿದ್ದರೂ ಅಧಿಕಾರಿಗಳು ಅದ್ಯಾವುದಕ್ಕೂ ಲೆಕ್ಕಿಸದೇ ಕೇವಲ ತಮ್ಮ ಜೇಬು ತುಂಬಿಸಿಕೊಳ್ಳುವ ಕೆಲ್ಸ ಮಾಡ್ತಿದ್ದಾರಂತೆ ಸಂಸ್ಥೆಗೆ ದ್ರೋಹ ಮಾಡುವ ಮನಸ್ಥಿತಿಯಲ್ಲಿರೋ ಕೆಲ ನಾಲಾಯಕ್‌ ಅಧಿಕಾರಿಗಳು..!

ಶಿವಮೊಗ್ಗ ವಿಭಾಗ ಇರೋದು KSRTC ಅಡಿಯಲ್ಲಿಯೇ, ಹೀಗಿದ್ದರೂ ಇಲ್ಲಿನ ಅಧಿಕಾರಿಗಳು ಕೇಂದ್ರ ಕಚೇರಿ ಆದೇಶವನ್ನೇ ಕಾಲು ಕಸ ಮಾಡಿಕೊಂಡು ಏಕಪಕ್ಷೀಯ ನಿರ್ಧಾರಗಳನ್ನ ಕೈಗೊಂಡಿದ್ದಾರಂತೆ. ಇದಕ್ಕೆ ಮಾರ್ಚ್‌ ತಿಂಗಳಿನಲ್ಲಿ ಮುಗಿಸಿದ ಕೌನ್ಸಿಲಿಂಗ್‌ ಪ್ರಕ್ರಿಯೆನೇ ಸಾಕ್ಷಿ ಅಂತ ಹೇಳ್ತಿದ್ದಾರೆ ನೊಂದ ಸಿಬ್ಬಂದಿ. ಚಾಲನಾ ಸಿಬ್ಬಂದಿಗೆ ಅನ್ಯಾಯವಾಗಬಾರ್ದು ಅಂತ 1192 ರಲ್ಲಿ ಜಾರಿಗೆ ತಂದ ಡ್ಯೂಟಿ ರೋಟಾ ಕೌನ್ಸಿಲಿಂಗ್‌ ಅನ್ನೇ ನಿರ್ಲಕ್ಷಿಸುವ ಮನಸ್ಥಿತಿ ಇರುವ ಇಂಥ ಅಧಿಕಾರಿಗಳಿಗೆ ಕೇಂದ್ರ ಕಚೇರಿ ಸುತ್ತೋಲೆ ಅನ್ವಯವಾಗೋದಿಲ್ವಾ ಎನ್ನುವ ಪ್ರಶ್ನೆ ಎದ್ದಿದ್ದು, ಕೇಂದ್ರ ಕಚೇರಿಗಿಂತ ಶಿವಮೊಗ್ಗ KSRTC ವಿಭಾಗವೇ ದೊಡ್ಡದಾ ಎನ್ನುವ ಪ್ರಶ್ನೆಯನ್ನ ಸಿಬ್ಬಂದಿ ಕೇಳ್ತಿದ್ದಾರೆ.

ಯಾವುದೇ ಕಾರಣಕ್ಕೂ ಚಾಲನಾ ಸಿಬ್ಬಂದಿಗಳಿಂದ ದೂರುಗಳಿಗೆ ಆಸ್ಪದ ನೀಡದಂತೆ ಪಾರದರ್ಶಕ ಕೌನ್ಸಿಲಿಂಗ್‌ ನಡೆಸುವಂತೆ ಈ ಹಿಂದೆ ಸೂಚಿಸಲಾಗಿತ್ತು. ಈ ಕುರಿತಂತೆ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಂದ ಹಿಂಬರಹ ನೀಡಲಾಗಿತ್ತು. ಹೀಗಿದ್ದರೂ ಶಿವಮೊಗ್ಗ ವಿಭಾಗದ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ಮಾಡಿ ದಬ್ಬಾಳಿಕೆ ದೌರ್ಜನ್ಯ ನಡೆಸಿ ಮಾರ್ಚ್‌ 10 2025 ರಂದು ಕೌನ್ಸಿಲಿಂಗ್‌ ನಡೆಸಿದ್ದಾರೆ. ಈ ಕುರಿತಂತೆ ಡ್ಯೂಟಿ ರೋಟಾ ಕೌನ್ಸೆಲಿಂಗ್ನ ಲ್ಲಿ ಹಲವು ಲೋಪದೋಷಗಳಿದ್ದು, ಅದನ್ನ ಸರಿಪಡಿಸಿ ಡ್ಯೂಟಿ ರೋಟಾ ಕೌನ್ಸೆಲಿಂಗ್ ನಡೆಸುವಂತೆ ಹಲವಾರು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದರೂ ಈದ್ಯಾವುದಕ್ಕೂ ಸೊಪ್ಪು ಹಾಕದೇ ಅಧಿಕಾರಿಗಳು ಡ್ಯೂಟಿ ರೋಟಾ ಕೌನ್ಸೆಲಿಂಗ್ ಮಾಡಿ ಮುಗಿಸಿದ್ದಾರೆ.

ಶಿವಮೊಗ್ಗ ವಿಭಾಗದ ಭದ್ರಾವತಿ ಘಟಕದಲ್ಲಿ ಮಾರ್ಚ್‌ 10ರಿಂದ 2025 ನೇ ಸಾಲಿನ ಚಾಲನ ಸಿಬ್ಬಂದಿ ಡ್ಯೂಟಿರೋಟ ಕೌನ್ಸಿಲಿಂಗ್ ನಡೆದಿತ್ತು. ಕೌನ್ಸಿಲಿಂಗ್‌ ವೇಳೆ ಮಹಿಳಾ ನಿರ್ವಾಹಕರಿಗೆ ಸಾಮಾನ್ಯ ಪಾಳಿಯ ಮಾರ್ಗಗಳನ್ನು ಗುರುತಿಸಿ ಘಟಕದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿತ್ತು. ಇದಾದ ಬಳಿಕ ಶಿವಮೊಗ್ಗ ವಿಭಾಗೀಯ ಸಂಚಲನಾಧಿಕಾರಿಗಳ ಆದೇಶದ ಮೇರೆಗೆ ಸಾಮಾನ್ಯ ಪಾಳಿ ಬದಲು ರಾತ್ರಿ ಮಾರ್ಗದ ಕಾರ್ಯಚರಣೆಯ ಅನುಸೂಚಿಗಳನ್ನು ನಿಗದಿಪಡಿಸಿ ಪ್ರಕಟಮಾಡಲಾಯ್ತು. ಈ ಕುರಿತ ಪ್ರತಿ thenewzmirrorಗೆ ಲಭ್ಯವಾಗಿದ್ದು, ಶಿವಮೊಗ್ಗ ವಿಭಾಗದ ಅಧಿಕಾರಿಗಳ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಡ್ಯೂಟಿ ರೋಟಾ ಕೌನ್ಸಿಲಿಂಗ್‌ ಹೆಸರಿನಲ್ಲಿ ಶಿವಮೊಗ್ಗ ಘಟಕದ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ. 17/1 ಚಾಲಕ ಕಂ ನಿರ್ವಾಹಕರಿಗೆ ಪ್ರತ್ಯೇಕವಾದಂತ ಬ್ಲಾಕ್, ಚಾಲಕ ಕಂ ನಿರ್ವಾಹಕರಿಗೆ ಸಪರೇಟ್‌ ಬ್ಲಾಕ್‌, BWS ಟ್ರಕ್‌ ಟ್ರಕ್ ರಾಂಪು ಎಲ್ಲಾ ಒಂದೇ ಡ್ಯೂಟಿ. ಮಹಿಳಾ ನಿರ್ವಾಹಕರಿಗೆ ಇವಿ ಬ್ಲಾಕ್, ಹಿರಿಯ ಚಾಲಕ ಹಾಗೂ ಹಿರಿಯ ನಿರ್ವಾಹಕ ಹಿರಿಯ ಚಾಲಕಂ ಮಾರ್ಚ್‌ 10 ರಂದು ನಡೆದಿದ್ದ ಕೌನ್ಸೆಲಿಂಗ್ ನಲ್ಲಿ ಹಲವಾರು ಅನುಮಾನಗಳು ಲೋಪದೋಷಗಳು ಇದ್ದಿದ್ದನ್ನ ಮನಗಂಡ ಶಿವಮೊಗ್ಗ C.I.T.U. ಸಂಘಟನೆ ಹೈಕೋರ್ಟ್ ನಲ್ಲಿ ದಾವೆ ಹೂಡಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ನ್ಯಾಯಾಲಯ ಸಿಬ್ಬಂದಿಗೆ ಅನ್ಯಾಯವಾಗದಂತೆ ಕೌನ್ಸಿಲಿಂಗ್‌ ನಡೆಸಿ ಅಂತ ನಿರ್ದೇಶನ ಕೊಟ್ಟಿದೆ. ಇದೀಗ ಕೋರ್ಟ್‌ ಅದೇಶದಂತೆ ಇದೇ ಜೂನ್‌ 19 ರಂದು ಮತ್ತೆ ಡ್ಯೂಟಿ ರೋಟಾ ಕೌನ್ಸಿಲಿಂಗ್‌ ನಡೆಸಲು ನಿರ್ಧರಿಸಲಾಗಿದೆ. ಆದ್ರೂ ಅಧಿಕಾರಿಗಳ ಅಂಧಾ ದರ್ಬಾರ್‌ ವಿರುದ್ಧ ನೊಂದ ಸಿಬ್ಬಂದಿ ಮತ್ತೆ ದೂರು ಸಲ್ಲಿಕೆ ಮಾಡಿದ್ದಾರೆ.

C.I.T.U. ಸಂಘಟನೆ ಕೊಟ್ಟ ದೂರಿನ ಅನ್ವಯ ಕೋರ್ಟ್‌ ನಿಂದ ನಿರ್ದೇಶನ ಬಂದ್ರೂ ಜಡ್ಡು ಹಿಡಿದ ಅಧಿಕಾರಿಗಳು ತಮಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೌನ್ಸಿಲಿಂಗ್‌ ನಡೆಸೋಕೆ ಸಿದ್ಧತೆ ಮಾಡಿಕೊಳ್ತಿದ್ದಾರೆ ಎನ್ನುವ ಆರೋಪ ಕೇಳಿ ಬರ್ತಿದೆ. ಈ ಕುರಿತಂತೆ ಲೋಕಾಯುಕ್ತಕ್ಕೆ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆಯೂ ಮನವಿ ಮಾಡಿದ್ದಾರೆ. ಅಷ್ಟೇ ಅಲ್ದೇ ಸಂಸ್ಥೆಯಲ್ಲಿರುವ ಖಾಯಂ ನೌಕರರ ಸೌಲತ್ತನ್ನ ಮೊಟಕುಗೊಳಿಸಿ ಖಾಸಗಿ ನೌಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿಶೇಷವಾದ ಬ್ಲಾಕ್‌ ಗಳನ್ನ ಸಿದ್ದಪಡಿಸಿ ಕೌನ್ಸೆಲಿಂಗ್‌ ನಲ್ಲಿ ಸೇರ್ಪಡೆ ಮಾಡಲು ಸಿದ್ಧತೆಗಳನ್ನ ಮಾಡಿಕೊಳ್ತಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ.

ಮೂಲಗಳ ಪ್ರಕಾರ KSRTC ಕೇಂದ್ರ ಕಚೇರಿಯಲ್ಲಿ ಈ ಕುರಿತಂತೆ ಲಿಖಿತ ದೂರಿನ ಪ್ರತಿ ಸಲ್ಲಿಕೆಯಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು AC ರೂಮಿನಲ್ಲಿ ಆ ಪ್ರತಿಯನ್ನ ಕಸದ ಬುಟ್ಟಿಗೆ ಹಾಕಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. 2025 ರ ಜೂನ್‌ 19 ರಂದು ಪುನಃ ನಡೆಯಲಿರುವ ಡ್ಯೂಟಿ ರೋಟಾ ಕೌನ್ಸಿಲಿಂಗ್‌ ಅನ್ನ ಪಾರದರ್ಶಕರವಾಗಿ ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಕೇಳಿ ಬರ್ತಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist