ಬೆಂಗಳೂರು, (www.thenewzmirror.com);
ಕಳೆದ 18 ವರ್ಷಗಳಿಂದ ಇದ್ದಿದ್ದು ಒಂದೇ ಕನಸು ಅದು IPL ಟ್ರೋಫಿಯನ್ನ ಎತ್ತಿ ಹಿಡಿಯಬೇಕು ಎನ್ನುವುದು.ಹೀಗಾಗಿಯೇ ಪ್ರತಿ ಬಾರಿ IPL ಟೂರ್ನಿ ಆರಂಭವಾದಾಗ RCB ಅಭಿಮಾನಿಗಳು ಈ ಸಲ ಕಪ್ ನಮ್ದೆ ಅಂತ ಘೋಷ ವಾಕ್ಯ ಹೇಳ್ತಾ ಇದ್ರು.
ಸತತ 18 ವರ್ಷಗಳ ಆ ಬೇಡಿಕೆ ಈಗ ಈಡೇರಿದ್ದು, RCB ಮೊದಲ ಬಾರಿಗೆ IPL ಟೂರ್ನಿಗೆ ಮುತ್ತಿಟ್ಟು, ಕೋಟ್ಯಾಂತರ ಅಭಿಮಾನಿಗಳ ಬೇಡಿಕೆಯನ್ನ ಈಡೇರಿಸಿದೆ.

ಅಹಮದಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿಯನ್ನ ಎತ್ತಿ ಹಿಡಿದಿದೆ.
ಚಾಂಪಿಯನ್ ತಂಡಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು RCB ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಬರೋಬ್ಬರಿ 18 ವರ್ಷಗಳ ತಪಸ್ಸು ಫಲಿಸಿದ್ದು, ಈ ಸಲ ಕಪ್ ನಮ್ದೇ ಎನ್ನುವ ಘೋಷಣೆ ಕೊನೆಗೂ ಸತ್ಯವಾದಂತಾಗಿದೆ. 18ನೇ ಐಪಿಎಲ್ ನಿಜವಾಗಲೂ ವಿರಾಟ್ ಕೊಹ್ಲಿಗೆ ಅರ್ಪಣೆಯಾದಂತಾಗಿದೆ.
ಆರ್ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಡಿಸಿಎಂ ಡಿಕೆ ಶಿವಕುಮಾರ್, 18 ವರ್ಷಗಳ ಕನಸು ನನಸು ಮಾಡಿದ ಆರ್ ಸಿ ಬಿ ತಂಡಕ್ಕೆ ಹೃತ್ಪೂರ್ವಕ ಶುಭಾಶಯ ಹೇಳಿದ್ದಾರೆ. ಅಷ್ಟೇ ಅಲ್ದೇ “ಈ ಸಲ ಕಪ್ ನಮ್ದೇ..” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಟಿವಿ ಪರದೆ ಮೂಲಕ ಪಂದ್ಯ ವೀಕ್ಷಿಸಿದ ಡಿಸಿಎಂ ಅವರು ಆರ್ ಸಿ ಬಿ ಗೆಲ್ಲುತ್ತಿದ್ದಂತೆ ಸಂಭ್ರಮ ಆಚರಿಸಿದರು.
ಈ ಒಂದು ಶುಭ ದಿನ, ಶುಭ ಘಳಿಗೆಗಾಗಿ ಇಡೀ ಕರ್ನಾಟಕ ಹಂಬಲಿಸಿತ್ತು. ಇದನ್ನು ಸಾಕಾರಗೊಳಿಸಿದ ರಜತ್ ಪಟೀದಾರ್ ಹಾಗೂ ವಿರಾಟ್ ಕೊಹ್ಲಿ ಅವರ ತಂಡಕ್ಕೆ ಮಾಧ್ಯಮ ಹೇಳಿಕೆಯಲ್ಲಿ ಶುಭ ಹಾರೈಸಿದ್ದಾರೆ.