ಮೈಸೂರು, (www.thenewzmirror.com);
ಮೊದಲ ಆಶಾಡ ಶುಕ್ರವಾರ ಅಂಗವಾಗಿ ಬೆಟ್ಟದ ಪಾದದಲ್ಲಿ ಮಹಿಳಾ ಭಕ್ತಾದಿಗಳಿಗೆ ಅರಿಶಿಣ, ಕುಂಕುಮ, ಬಳೆಗಳೊಂದಿಗೆ ಉಡಿ ತುಂಬಲಾಯ್ತು. ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಮೊದಲ ಆಷಾಢ ಶುಕ್ರವಾರ ಅಂಗವಾಗಿ ಚಾಮುಂಡಿ ಬೆಟ್ಟದ ಪಾದದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸಿದ ಮುತ್ತೈದೆ ಮಹಿಳೆಯರಿಗೆ ಅರಿಶಿಣ ,ಕುಂಕುಮ, ಬಳೆಗಳೊಂದಿಗೆ ಬಾಗಿನ (ಉಡಿ) ತುಂಬಿದರು.
ಬಳಿಕ ಮಾತನಾಡಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಆಷಾಢ ಮಾಸದ ನಾಡ ಅಧಿದೇವತೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನಡೆಸಲಾಗ್ತಿದೆ. ಈ ಹಿನ್ನಲೆಯಲ್ಲಿ ಸಾವಿರಾರು ಭಕ್ತಾಧಿಗಳು ತಾಯಿಗೆ ಹರಕೆ ತಿರಿಸಲು ಬೆಟ್ಟದ ಪಾದದಿಂದ ಬೆಟ್ಟದ ಮೇಲೆ ವರೆಗೂ ಅರಿಶಿನ ಕುಂಕುಮ ಹಚ್ಚುತ್ತಾರೆ.



ಅಂತಹ ಮಹಿಳಾ ಭಕ್ತಾಧಿಗಳಿಗೆ ಅರಿಶಿನ ಕುಂಕುಮ ಹಾಗೂ ಬಳೆಗಳನ್ನು ನೀಡಿ ಅವರಿಗೆ ತಾಯಿ ಚಾಮುಂಡೇಶ್ವರಿ ಒಳಿತನ್ನು ನೀಡಲಿ ಎಂದು ಆರೈಸುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕಿ ಖುಷಿವಿನು, ಸರಸ್ವತಿ ಹಲಸಗಿ, ಸವಿತಾ ಘಾಟ್ಕೆ, ಜಯಶ್ರೀ ಶಿವರಾಮ್, ಸುಶೀಲ, ಹಾಗೂ ಇನ್ನಿತರರು ಹಾಜರಿದ್ದರು