ಘಟಪ್ರಭಾ ಮತ್ತು ರಾಯಬಾಗದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ

RELATED POSTS

ಬೆಂಗಳೂರು(www.newzmirror.com):ಘಟಪ್ರಭಾ ಮತ್ತು ರಾಯಬಾಗದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ ನಿರ್ಧಾರ ಕೈಗೊಂಡಿದ್ದು,ಹೊಸಪೇಟೆ-ಮುಂಬೈ ಎಕ್ಸ್ ಪ್ರೆಸ್ ರೈಲು ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದುಕಲ್ಯಾಣ್ ನಿಲ್ದಾಣದಲ್ಲಿ ನಿಲುಗಡೆಯಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಯಶವಂತಪುರ-ಪಂಢರಪುರ-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈ.ಸಂ.16541/16542) ರೈಲುಗಳಿಗೆ ಘಟಪ್ರಭಾ ಮತ್ತು ರಾಯಬಾಗ ನಿಲ್ದಾಣಗಳಲ್ಲಿ ಒದಗಿಸಲಾಗಿರುವ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಮಾರ್ಚ್ 27, 2025 ರಿಂದ ಜೂನ್ 30, 2025 ರವರೆಗೆ ಮೂರು ತಿಂಗಳ ಅವಧಿಗೆ ಮುಂದುವರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ಹೊಸಪೇಟೆ-ಮುಂಬೈ ಎಕ್ಸ್ ಪ್ರೆಸ್ ರೈಲು ಮಾರ್ಗದಲ್ಲಿ ಬದಲಾವಣೆ; ಕಲ್ಯಾಣ್ ನಿಲ್ದಾಣದಲ್ಲಿ ನಿಲುಗಡೆಯಿಲ್ಲ:

ಮಧ್ಯ ರೈಲ್ವೆಯು ಅಂಬರನಾಥ ಮತ್ತು ಬದ್ಲಾಪುರ ನಡುವೆ ರೈಲ್ವೆ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದರಿಂದ, ಮಾರ್ಚ್ 29 ರಂದು ಹೊಸಪೇಟೆಯಿಂದ ಹೊರಡುವ ರೈಲು ಸಂಖ್ಯೆ 11140 ಹೊಸಪೇಟೆ-ಸಿಎಸ್ಎಂಟಿ ಮುಂಬೈ ಎಕ್ಸ್ಪ್ರೆಸ್ ರೈಲಿನ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಈ ರೈಲು ಲೋನಾವಲ, ಕರ್ಜತ್, ಪನ್ವೇಲ್, ದಿವಾ ಮತ್ತು ಥಾಣೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಇದರಿಂದಾಗಿ, ಈ ರೈಲು ಕಲ್ಯಾಣ್ ನಿಲ್ದಾಣದಲ್ಲಿ ತನ್ನ ನಿಗದಿತ ನಿಲುಗಡೆಯನ್ನು ಹೊಂದಿರುವುದಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ, ಈ ರೈಲಿಗೆ ಪನ್ವೇಲ್ನಲ್ಲಿ ಹೆಚ್ಚುವರಿ ತಾತ್ಕಾಲಿಕ ನಿಲುಗಡೆಯನ್ನು ಕಲ್ಪಿಸಲಾಗಿದೆ ಎಂದು ಮಧ್ಯ ರೈಲ್ವೆಯು ಸೂಚಿಸಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist