ಬೆಂಗಳೂರು(www.thenewzmirror.com):ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಕೈಗೊಂಡಿರುವ ಬಸ್ಗಳ ಬ್ರಾಂಡಿಂಗ್ ಉಪಕ್ರಮಕ್ಕೆ ಬಳಕೆದಾರರ ಅನುಭವವನ್ನು ಹೆಚ್ಚಿಸುವಲ್ಲಿ ಸಾಧನೆಗೈದ ಕಾರಣಕ್ಕಾಗಿ ಇಕಾನಾಮಿಕ್ ಟೈಮ್ಸ್ ಪಿಎಸ್ಯು ಲೀಡರ್ಶಿಪ್ ಅಂಡ್ ಎಕ್ಸಲೆನ್ಸ್ ಅವಾರ್ಡ್ 2025 ಪುರಸ್ಕಾರ ದೊರಕಿದೆ.
ನವದೆಹಲಿಯ ಹೋಟೆಲ್ ಹೈಯಟ್ ರಿಜೆನ್ಸಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ ಡೈರೆಕ್ಟರ್ ಜನರಲ್ ಇಂದರ್ ಪಾಲ್ ಸಿಂಗ್ ಸೇಥಿ ಅವರು ಈ ಪುರಸ್ಕಾರವನ್ನು ನಿಗಮಕ್ಕೆ ನೀಡಿದರು. ಈ ಪ್ರಶಸ್ತಿಯನ್ನು ನಿಗಮದ ಪರವಾಗಿ ಮುಖ್ಯ ಕಾನೂನು ಅಧಿಕಾರಿ ವೆಂಕಟೇಶ್ ಟಿ, ಮತ್ತು ಕೇಂದ್ರ ಕಚೇರಿಯ ಮುಖ್ಯ ಕಾಮಗಾರಿ ಅಭಿಯಂತರ ಕುತ್ಬುದ್ದೀನ್ ಹವಾಲ್ದಾರ್ ಸ್ವೀಕರಿಸಿದರು.
ಇತ್ತೀಚೆಗಷ್ಟೇ ಕೆಎಸ್ಆರ್ಟಿಸಿ ಬಿಡಬ್ಲ್ಯೂ ಮಾರ್ಕೆಟಿಂಗ್ ವರ್ಲ್ಡ್ ಮತ್ತು ಬಿಡಬ್ಲ್ಯೂ ಬಿಸಿನೆಸ್ ವರ್ಲ್ಡ್ ಸಹಯೋಗದಲ್ಲಿ ನೀಡುವ ಬಹುಮಾನಗಳಲ್ಲಿ 2 ಗೋಲ್ಡ್ ಅವಾರ್ಡ್ಗಳನ್ನು ಪಡೆದಿತ್ತು.ಯುಪಿಐ ಸೌಲಭ್ಯದೊಂದಿಗೆ AWATAR 4.0 ಯೋಜನೆಗೆ “ಟೆಕ್ನಾಲಜಿ ಆಫ್ ದಿ ಇಯರ್” ವಿಭಾಗದಲ್ಲಿ ಗೋಲ್ಡ್ ಅವಾರ್ಡ್ ಮತ್ತು “ಟ್ರಾವೆಲ್, ಟೂರಿಸಂ & ಲೆಷರ್” ವಿಭಾಗದಲ್ಲಿ ಬಸ್ಗಳ ಬ್ರಾಂಡಿಂಗ್ಗೆ ಗೋಲ್ಡ್ ಅವಾರ್ಡ್ ಪಡೆದಿದ್ದ ಬೆನ್ನಲ್ಲೆ ಈಗ ಮತ್ತೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.