ಶ್ರೀನಗರ, (www.thenewzmirror.com);
ಪಹಲ್ಗಾಂ ಕಣಿವೆಯಲ್ಲಿ ಉಗ್ರರ ದಾಳಿಗೆ 26 ಪ್ರವಾಸಿಗರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಕಣ್ಣೆದುರೇ ಸಂಬಂಧಿಕರಿಗೆ ಗುಂಡು ಹಾರಿಸಿದ ಉಗ್ರರ ಆ ಅಟ್ಟಹಾಸ ಮರೆಯೋಕೆ ಸಾಧ್ಯವೇ ಇಲ್ಲ. ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಕಲ್ಲು ಮನಸ್ಸಿನ ಉಗ್ರರು ಮನಸೋ ಇಚ್ಛೆ ಗುಂಡು ಹಾರಿಸಿ ಸಿಕ್ಕ ಸಿಕ್ಕವರ ಬಲಿ ಪಡೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಕರ್ನಾಟಕದ ಇಬ್ಬರು ಪ್ರವಾಸಿಗರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
In the face of terror, humanity spoke louder. A Kashmiri risking his life to rescue an injured tourist boy — this is the real Kashmir. Not defined by violence, but by compassion, courage and love. Let the world see who we truly are..#PahalgamTerroristAttack… pic.twitter.com/16PkuPtVuQ
— Inam Un Nabi انعام النبی (@inamnabi) April 23, 2025
ಭಯೋತ್ಪಾದಕ ದಾಳಿಗೆ ಸಿಲುಕಿ ದಿಕ್ಕು ತೋಚದೆ ಅಳುತ್ತಿದ್ದ ಬಾಲಕನ ಜೀವ ಉಳಿಸಿದ್ದು ಕಾಶ್ಮೀರದ ಯುವಕ. ರಕ್ತದ ಮಡುವಿನಲ್ಲಿ ಅಳುತ್ತಿದ್ದ ಯುವಕ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ ಪುತ್ರ. ಘಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಕಾಶ್ಮೀರದ ಯುವಕ ಬಾಲಕನಿಗೆ ದೇವರಂತೆ ಕೈ ಚಾಚಿದ್ದಾನೆ. ಗಾಯಗೊಂಡ ಬಾಲಕನನ್ನು ತನ್ನ ಜೀವದ ಹಂಗನ್ನೂ ಲೆಕ್ಕಿಸದೆ ಹೆಗಲ ಮೇಲೆ ಹೊತ್ತುಕೊಂಡೇ ಕಿಲೋಮೀಟರ್ ದೂರ ಓಡಿ ಬಾಲಕನ ಜೀವ ಉಳಿಸಿದ್ದಾನೆ. ಮೃತ ಮಂಜುನಾಥ್ ಅವರ ಪುತ್ರ ಅಭಿಜಯ್ ನನ್ನು ಸ್ಥಳೀಯ ವ್ಯಕ್ತಿಯೊಬ್ಬ ಬೆನ್ನ ಮೇಲೆ ಸಾಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಹಸಿರಿನಿಂದ ಕೂಡಿದ್ದ ಪ್ರವಾಸಿ ತಾಣವನ್ನ ಕೆಂಪುಬಣ್ಣವನ್ನಾಗಿಸಿದ ಉಗ್ರರ ಅಟ್ಟಹಾಸದ ನಡುವೆನೂ ಒಬ್ಬ ಭಾರತೀಯ ಯುವಕ ಅವರ ವಿರುದ್ಧ ನಿಂತು ಬಾಲಕನ ಜೀವ ಉಳಿಸಿರುವುದನ್ನ ಕಂಡ ಕೆಲವರು ನಿಜವಾದ ಕಾಶ್ಮೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.