ಬೆಂಗಳೂರು, (www.thenewzmirror.com):
ಸಾಕಷ್ಟು ವಿರೋಧಗಳ ನಡುವೆಯೇ ರಾಜ್ಯದಲ್ಲಿ ಕಳೆದ ಎರಡು ವಾರದಿಂದ ಹೇರಿದ್ದ ನೈಟ್ ಕರ್ಫ್ಯೂ ವನ್ನ ರದ್ದು ಮಾಡಿದೆ. ಆ ಮೂಲಕ ರಾಜ್ಯ ಒತ್ತಾಯಕ್ಕೆ ಮಣಿದು ಈ ತೀರ್ಮಾನ ಮಾಡಿದೆ ಎಂದು ವಿಶ್ಲೇಶಿಸಲಾಗುತ್ತಿದೆ.
ಕೋವಿಡ್ ನಿಯಂತ್ರಣ ಸಂಬಂಧ ಇಂದು ಮಹತ್ವದ ಸಭೆ ನಡೆಸಿದ್ದ ಸಿಎಂ ಎಲ್ಲ ತಜ್ಞರ ಜತೆ ಚರ್ಚೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ ಅಂತ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ರು. ಸುದೀರ್ಘ ಎರಡೂವರೆಗಂಟೆ ಗಳ ಕಾಲ ನಡೆದ ಸಭೆಯಲ್ಲಿ ಯಾವೆಲ್ಲಾ ಪ್ರಮುಖ ನಿರ್ಧಾರ ಕೈಗೊಳ್ಳಲಾಯ್ತು ಅನ್ನೋದನ್ನ ನೋಡುವುದಾದರೆ..,
- ವೀಕೆಂಡ್ ಕರ್ಫ್ಯೂ ರದ್ದು( ಹಿಂಪಡೆತ)
- ಪಾಸಿಟಿವಿಟಿ ದರ ಹೆಚ್ಚಾದ್ರೆ ಮತ್ತೆ ವೀಕೆಂಡ್ ಕರ್ಫ್ಯೂ ಹೇರಿಕೆ
- ನೈಟ್ ಕರ್ಫ್ಯೂ ಯಥಾಪ್ರಕಾರ ಮುಂದುವರಿಕೆ
- ಬೆಂಗಳೂರಿನಲ್ಲಿ ಜ.29 ರ ವರೆಗೂ ಶಾಲೆ ಓಪನ್ ಇಲ್ಲ
- ರಾಜ್ಯದ ಇತರೆಡೆ ಆಯಾ ಜಿಲ್ಲಾಧಿಕಾರಿಗಳ ತೀರ್ಮಾನ
- ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮ ನಡೆಸುವಂತಿಲ್ಲ
- ಆಸ್ಪತ್ರೆಗೆ ದಾಖಲಾಗುವ ಪ್ರಮಾಣದ ಆಧರಿಸಿ ಈ ತೀರ್ಮಾನ