ಬೆಂಗಳೂರು, (www.thenewzmirror.com) ;
ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕಾಫಿ ರೈಟ್ ಉಲ್ಲಂಘನೆ ಆರೋಪದಲ್ಲಿ FIR ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಫ್ಐಆರ್ ದಾಖಲಾಗಿದೆ. 2 ಚಿತ್ರದ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಆರೋಪ ಸದ್ಯ ರಕ್ಷಿತ್ ಶೆಟ್ಟಿ ವಿರುದ್ಧ ಇದೆ.
ನಟನ ವಿರುದ್ಧ ನವೀನ್ ಕುಮಾರ್ ಎಂಬುವವರರು ದೂರು ನೀಡಿದ್ದು, ‘ನ್ಯಾಯ ಎಲ್ಲಿದೆ’, ‘ಗಾಳಿಮಾತು’ ಸಿನಿಮಾದ ಹಾಡುಗಳ ಬಳಕೆ ಆರೋಪ ಮಾಡಿದ್ದಾರೆ. ಈ ದೂರು ಆಧರಿಸಿ ಯಶವಂತಪುರ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ.




ಎಂಆರ್ ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾರ್, ಎರಡು ಚಿತ್ರದ ಹಾಡುಗಳನ್ನ ಅನುಮತಿ ಇಲ್ಲದೆ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 2024 ಜನವರಿಯಲ್ಲಿ ಚಿತ್ರದ ಹಾಡುಗಳ ಬಳಕೆ ಬಗ್ಗೆ ಮಾತುಕತೆಯಾಗಿತ್ತು. ಅದ್ರೆ ಮಾತುಕತೆ ಸರಿ ಹೊಂದದೆ ಇದ್ದರಿಂದ ಅಲ್ಲಿಗೆ ನಿಲ್ಲಿಸಲಾಗಿತ್ತು. ಇದಾದ ನಂತರ 2024 ಮಾರ್ಚ್ ನಲ್ಲಿ ಅಮೇಜಾನ್ ಫ್ರೈಮ್ ನಲ್ಲಿ ರಕ್ಷಿತ್ ಶೆಟ್ಟಿ ಬ್ಯಾಚುಲರ್ ಪಾರ್ಟಿ ಸಿನಿಮಾ ರಿಲೀಸ್ ಆಗಿತ್ತು.
ನ್ಯಾಯ ಎಲ್ಲಿದೆ ಚಿತ್ರದ ‘ನ್ಯಾಯ ಎಲ್ಲಿದೆ ಹಾಡು’ ಹಾಗೂ ಗಾಳಿ ಮಾತು ಚಿತ್ರದ ‘ಒಮ್ಮೆ ನಿನ್ನನ್ನು’ ಹಾಡು ಬಳಕೆ ಆರೋಪ ಮಾಡಿರೋ ನವೀನ್ ಪರಮ್ವಾ ಸ್ಟುಡಿಯೋಸ್ ಹಾಗೂ ರಕ್ಷಿತ್ ಶೆಟ್ಟಿ ವಿರುದ್ಧ ದೂರು ಕೊಡಲಾಗಿದೆ.
ನವೀನ್ ಕುಮಾರ್ ನೀಡಿರೋ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿರೋ ಪೊಲೀಸರು ಆರೋಪ ಸಂಬಂಧ ರಕ್ಷಿತ್ ಶೆಟ್ಟಿ ಸಂಪರ್ಕಿಸಿ, ವಿಚಾರಣೆಗೆ ಹಾಜರಾಹುವಂತೆ ಸೂಚಿಸಿದ್ದಾರೆ.