Crime News | ಮಾನನಷ್ಟ ಮೊಕದ್ದಮೆ; ಕಸಾಪ ಮಾಜಿ ಅಧ್ಯಕ್ಷನಿಗೆ 10 ಲಕ್ಷ ದಂಡ ವಿಧಿಸಿದ ಕೋರ್ಟ್‌

Defamation case; Court fines former Kasapa president Rs. 10 lakh

ಬೆಂಗಳೂರು, (www.thenewzmirror.com);

ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಮಾಯಾಣ್ಣರವರಿಗೆ 10ಲಕ್ಷ ರೂಪಾಯಿ ದಂಡವನ್ನ ವಿಧಿಸಿ 24ನೇ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ ಆದೇಶ ಹೊರಡಿಸಿದೆ. ಬೆಂಗಳೂರು ಬೃಹತ್ ನಗರ ಪಾಲಿಕೆ ನೌಕರರು ಮತ್ತು ಅಧಿಕಾರಿಗಳ ಕಲ್ಯಾಣ ಸಂಘದ ವಿರುದ್ದ ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮಾಯಣ್ಣ ಮತ್ತು ಅವರ ಬೆಂಬಲಿಗರು ಅಪಪ್ರಚಾರ ಮಾಡುವುದನ್ನು ಪ್ರತಿಬಂಧಿಸಿ ನಗರ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಕೋರ್ಟ್‌ನ ಈ ಆದೇಶದಿಂದ ಮಾಯಾಣ್ಣ ಮತ್ತು ಅವರ ಬೆಂಬಲಿಗರಿಗೆ ಭಾರೀ ಮುಖಭಂಗವಾಗಿದೆ.

RELATED POSTS

ಆದೇಶದ ಪ್ರತಿ
ಕ.ಸಾ.ಪ. ಮಾಜಿ ಅಧ್ಯಕ್ಷ ಮಾಯಣ್ಣ

24ನೇ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ ಈ ಆದೇಶ ನೀಡಿದೆ. ಅಲ್ಲದೇ ಆದೇಶದ ದಿನಾಂಕದಿಂದ 3 ತಿಂಗಳೊಳಗೆ ದೂರುದಾರ ಸಂಘಕ್ಕೆ ಹತ್ತು ಲಕ್ಷ ರೂಪಾಯಿಗಳ ನಷ್ಟವನ್ನು ಪಾವತಿಸುವಂತೆ ಪ್ರತಿವಾದಿ ಮಾಯಣ್ಣ ಅವರಿಗೆ ನ್ಯಾಯಾಧೀಶರಾದ ರೇಣುಕಾ ಡಿ ರಾಯ್ಕರ್ ಆದೇಶ ನೀಡಿದ್ದಾರೆ. ಪ್ರತಿವಾದಿಯು ದಾಖಲಿಸಿರುವ ಪ್ರಶ್ನಿಸದ ವಾದಗಳು, ಮೌಖಿಕ ಮತ್ತು ದಾಖಲೆಪತ್ರ ಸಾಕ್ಷ್ಯಗಳಿಂದ. ದೂರುದಾರ ಸಾಬೀತು ಮಾಡಿರುವುದೇನೆಂದರೆ ಪ್ರತಿವಾದಿಯು ಮಾಡಿರುವ ವಿವಿಧ ಸುಳ್ಳು ದೂರುಗಳು, ಪ್ರಚಾರಗಳು ಇತ್ಯಾದಿಗಳಿಂದಾಗಿ ಸೊಸೈಟಿ ಮತ್ತು ಅದರ ಅಧ್ಯಕ್ಷರು ಅನಾನುಕೂಲತೆ ಮತ್ತು ಕಿರುಕುಳವನ್ನು ಅನುಭವಿಸಿದ್ದಾರೆ. ಆದ್ದರಿಂದ. ದೂರುದಾರರು ಪ್ರಾರ್ಥಿಸಿದಂತೆ ಶಾಶ್ವತ ತಡೆಯಾಜ್ಞೆ ಪರಿಹಾರಕ್ಕೂ ಅರ್ಹರಾಗಿದ್ದಾರೆ ಎಂದು ಕೋರ್ಟ್ ಆದೇಶ ನೀಡಿದೆ.

ಪ್ರತಿವಾದಿಯು ಅಥವಾ ಅವರ ಕಡೆಯವರು ಫಿರ್ಯಾದಿ ಸಂಘ ಮತ್ತು ಅದರ ಪದಾಧಿಕಾರಿಗಳು, ಅದರ ಅಧ್ಯಕ್ಷ ಅಮೃತ್‌ರಾಜ್ ಅಥವಾ ಅವರ ಕುಟುಂಬ ಸದಸ್ಯರು ಮತ್ತು ಅವರಿಗೆ ಸಂಬಂಧಪಟ್ಟವರನ್ನು ಯಾವುದೇ ರೀತಿಯ ಚಾರಿತ್ರ್ಯ ವಧೆ ಅಥವಾ ಮಾನನಷ್ಟಕ್ಕೆ ಒಳಪಡಿಸುವುದನ್ನು ಕೋರ್ಟ್ ಪ್ರತಿಬಂಧಿಸಿ ತಡೆಯಜ್ಞೆ ಕೊಟ್ಟಿದೆ. ಸಂಘದ ಬಗ್ಗೆ ಅಥವಾ ಅಧ್ಯಕ್ಷರು, ಪದಾಧಿಕಾರಗಳ ಅವರ ಬಗ್ಗೆ ಅಪಪ್ರಚಾರ ಬರೆಯುವುದು. ಪ್ರಕಟಿಸುವುದು. ಪ್ರಚಾರ ಮಾಡುವುದು, ಪ್ರಸಾರ ಮಾಡುವುದು ಅಥವಾ ಪ್ರಕಟಿಸುವುದು ಅಥವಾ ಪ್ರಸಾರಕ್ಕೆ ಅವಕಾಶ ನೀಡುವುದು ಸೇರಿದಂತೆ ಯಾವುದೇ ರೀತಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಳ್ಳುವುದು ಅಥವಾ ವರ್ತಿಸುವುದು ಅಥವಾ ನಕಾರಾತ್ಮಕವಾಗಿ ತೊಡಗುವುದಕ್ಕೆ ಶಾಶ್ವತ ತಡೆಯಾಜ್ಞೆಯ ಆದೇಶದ ಮೂಲಕ ನಿರ್ಬಂಧಿಸಲಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಆದೇಶದ ದಿನಾಂಕದಿಂದ 3 ತಿಂಗಳೊಳಗೆ ದೂರುದಾರ ಸಂಘಕ್ಕೆ ಹತ್ತು ಲಕ್ಷ ರೂಪಾಯಿಗಳ ನಷ್ಟವನ್ನು ಪಾವತಿಸುವಂತೆ ಪ್ರತಿವಾದಿ ಮಾಯಣ್ಣ ಅವರಿಗೆ 24ನೇ ಹೆಚ್ಚುವರಿ ಸಿಟಿ ಸಿವಿಲ್ ಅಂಡ್‌ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ ಆದೇಶಿಸಿದೆ. ಪ್ರತಿವಾದಿ ಮಾಯಾಣ್ಣ ಅವರು ಅಪಪ್ರಚಾರ ಮಾಡಿ ಸಂಘಕ್ಕೆ ಮತ್ತು ಅಧ್ಯಕ್ಷರು-ಪದಾಧಿಕಾರಗಳಿಗೆ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ಇಂಥ ಅಪಪ್ರಚಾರ ಮಾಡುವುದು, ಸುಳ್ಳು ಆರೋಪಗಳನ್ನು ಪ್ರಕಟಿಸುವುದು, ಸಂಘ ಮತ್ತು ಅಧ್ಯಕ್ಷರು-ಪದಾಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಅಪಾದನೆಗಳನ್ನು ಮಾಡುತ್ತಾ ಚಾರಿತ್ರ್ಯವಧೆ ಅಥವಾ ಮಾನನಷ್ಟ ಮಾಡುವುದನ್ನು ನಿರ್ಬಂಧಿಸಿ ಶಾಶ್ವತ ತಡೆಯಾಜ್ಞೆ ನೀಡಬೇಕೆಂದು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ನೌಕರರು ಮತ್ತು ಅಧಿಕಾರಿಗಳ ಕಲ್ಯಾಣ ಸಂಘ ಕೋರ್ಟ್‌ ಮೊರೆ ಹೋಗಿತ್ತು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist