ಬೆಂಗಳೂರು, (www.thenewzmirror.com);
ಐಪಿಎಲ್ 18 ನೇ ಆವೃತ್ತಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ RCB ಪಂಜಾಬ್ ತಂಡವನ್ನ ಎದುರಿಸಲಿದೆ.
ಇಂದು ನಡೆಯಲಿರುವ ಐಪಿಎಲ್ 2025ರ ಅಂತಿಮ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ಲೀಗ್ ಹಂತದಲ್ಲಿ ಏಳು-ಬೀಳುಗಳನ್ನು ಕಂಡಿದ್ದರೂ, ಅಂತಿಮವಾಗಿ ಪ್ರಶಸ್ತಿಗಾಗಿ ಸೆಣಸಲು ಸಜ್ಜಾಗಿವೆ.
RCB ಅಭಿಮಾನಿಗಳು ಈ ಬಾರಿ ಕಪ್ ನಮ್ದೆ ಅನ್ನೋ ವಿಶ್ವಾಸ ಹೊಂದಿದ್ದು ನೆಚ್ಚಿನ ತಂಡದ ಗೆಲುವಿಗಾಗಿ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಕರ್ನಾಟಕ ಸೇರಿದಂತೆ ಇಡೀ ವಿಶ್ವದಾದ್ಯಂತ ಇರುವ RCB ಅಭಿಮಾನಿಗಳು ಫೈನಲ್ ಪಂದ್ಯ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೆ ರಾಜಕಾರಣಿಗಳು, ಉದ್ಯಮಿಗಳು, ವ್ಯಾಪಾರಿಗಳೂ ಹೊರತಾಗಿಲ್ಲ.

ಇದರ ನಡುವೆನೇ RCB ಅಭಿಮಾನಿಗಳಿಗೆ ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರದ ಶಾಸಕರು ಅಹಮದಬಾದ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯವನ್ನ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿಜಯನಗರದ ಎಂಸಿ ಲೇಔಟ್ ನಲ್ಲಿರುವ BGS ಆಟಸ ಮೈದಾನದಲ್ಲಿ ಬೃಹತ್ ಪರದೆ ಅಳವಡಿಸುವ ಮೂಲಕ ನೇರ ವೀಕ್ಷಣೆಗೆ ಸದಾವಕಾಶ ಮಾಡಿಕೊಟ್ಟಿದ್ದಾರೆ.
ಪ್ರವೇಶ ಉಚಿತವಿದ್ದು, ಉಚಿತ ಟಿಕೆಟ್ ಇದ್ದವರಿಗೆ ಮಾತ್ರ ಮೈದಾದನ ಒಳಗೆ ಪ್ರವೇಶ ಇರಲಿದೆ.
ನಾವೂ ಬರ್ತೀವಿ ನೀವೂ ಬನ್ನಿ..
BGS ಆಟದ ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳ ಜತೆಗೆ ವಿಜಯನಗರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಕೃಷ್ಣಪ್ಪ, ಹಾಗೂ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಫೈನಲ್ ಪಂದ್ಯ ವೀಕ್ಷಣೆ ಮಾಡಲಿದ್ದಾರೆ. ಹೀಗಾಗಿ ನಿಮ್ಮೊಡನೆ ನಾವೂ ಬರುತ್ತಿದ್ದೇವೆ, ನೀವು ಮತ್ತು ನಿಮ್ಮ ಸ್ನೇಹಿತರನ್ನ ಕರೆ ತನ್ನಿ ಅಂತ ಅಭಿಮಾನಿಗಳಿಗೆ ಹೇಳುತ್ತಿರುವ ಫೋಸ್ಟರ್ ಗಳು ರಾರಾಜಿಸುತ್ತಿವೆ.
ಫೈನಲ್ ಪಂದ್ಯ ವೀಕ್ಷಣೆಗೆ ಬೃಹತ್ ಪರದೆ, ಅಭಿಮಾನಿಗಳಿಗಾಗಿ ಆಸನದ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಆರ್ ಸಿಬಿ ಅಭಿಮಾನಿಗಳು ಬಂದು ಸೇರುವ ನಿರೀಕ್ಷೆಯಿದೆ. ಮೈದಾನದಲ್ಲಿ ಪಂದ್ಯ ವೀಕ್ಷಣೆ ಆದರೂ ಮನೆಯಲ್ಲಿ ಕೂತು ಪಂದ್ಯ ನೋಡಿದ ಅನುಭವ ಅಭಿಮಾನಿಗಳಿಗೆ ಪಕ್ಕಾ ಸಿಗಲಿದೆ.
ಅದೆನೇ ಇರ್ಲಿ ಕೋಟ್ಯಾಂತರ ಜನರ ಹಾರೈಕೆಯಂತೆ ಈ ಬಾರಿಯಾದರೂ RCB ಐಪಿಎಲ್ ಟೂರ್ನಿ ಗೆಲ್ಲಲ್ಲಿ ಅನ್ನೋದೇ ನಮ್ಮ ಆಶಯ.