ಬೆಂಗಳೂರು(www.thenewzmirror.com): ಮೇ 2 ರಂದು ಕೇದಾರನಾಥನ ಬಾಗಿಲು ತೆರೆಯುವ ಪ್ರಯುಕ್ತ ಪರಂಪರೆಯ ಪ್ರಕಾರ ಕೇದಾರ ವೈರಾಗ್ಯ ಪೀಠವಾದ ಊಖಿಮಠದ ಓಂಕಾರೇಶ್ವರ ಮಂದಿರದಿಂದ ಪಂಚಕೇದಾರೇಶ್ವರ ಉತ್ಸವ ಮೂರ್ತಿಯನ್ನು ಕೇದಾರ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ಹಾಗು ಈ ವರ್ಷದ ಕೇದಾರನಾಥ ದೇವಸ್ಥಾನದ ಪ್ರದಾನ ಅರ್ಚಕರಾಗಿ ಆಯ್ಕೆಯಾಗಿರುವ ದಾವಣಗೆರೆ ಜಿಲ್ಲೆಯವರಾದ ವಾಗೀಶ್ ಲಿಂಗರವರು ಜೊತೆಗೂಡಿ ಕೇದಾರನಾಥದ ಕಡೆಗೆ ಪ್ರಯಾಣ ಬೆಳೆಸಿದರು.



