ಮತ್ತೊಮ್ಮೆ ರೈತರು ಬೀದಿಗಿಳಿದರೆ ಸರ್ಕಾರದ ಬುಡ ಅಲುಗಾಡುತ್ತದೆ: ವಿಜಯೇಂದ್ರ

RELATED POSTS

ತುಮಕೂರು(www.thenewzmirror.com): ಇವತ್ತು ರೈತರು ರಸ್ತೆಗೆ ಇಳಿದಿದ್ದಾರೆ. ಮತ್ತೊಮ್ಮೆ ರೈತರು ಬೀದಿಗಿಳಿದರೆ ನಿಮ್ಮ ಸರ್ಕಾರದ ಬುಡ ಅಲುಗಾಡುತ್ತದೆ. ಎಲ್ಲ ರೈತರು, ಮುಖಂಡರನ್ನು ಕೂರಿಸಿ ವೈಜ್ಞಾನಿಕವಾಗಿ ಪರಿಶೀಲಿಸಬೇಕು

ಜಿಲ್ಲೆಯ ರೈತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಏನೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಸರ್ವ ಪಕ್ಷ ಸಭೆ ಕರೆಯಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ  ಆಗ್ರಹಿಸಿದ್ದಾರೆ.

ಇಂದು ಗುಬ್ಬಿಯ ಸುಂಕಾಪುರದ ಹೇಮಾವತಿ ಕಾಲುವೆ ಪ್ರದೇಶಕ್ಕೆ ಬಿಜೆಪಿ ಮುಖಂಡರ ಜೊತೆ ಭೇಟಿ ನೀಡಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆನಾಲ್ ಕಾಮಗಾರಿ ನಿಲ್ಲಿಸಬೇಕು, ಯಾವುದೇ ಕಾರಣಕ್ಕೂ ಹೇಮಾವತಿ ನೀರಿನ ವಿಚಾರದಲ್ಲಿ ತುಮಕೂರು ಜನರಿಗೆ ಅನ್ಯಾಯವಾಗಬಾರದು.ಹೇಮಾವತಿ ನೀರು ತುಮಕೂರು ಜನರ ಹಕ್ಕು. ರಾಜ್ಯ ಸರ್ಕಾರವು ಹೋರಾಟ, ಜನರ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು. ಮೊನ್ನೆ ದಿನ ಇದೇ ಜಾಗದಲ್ಲಿ 20 ಸಾವಿರ ಸಂಖ್ಯೆಯಲ್ಲಿ ರೈತರು ಮುತ್ತಿಗೆ ಹಾಕಿದ್ದರು ಎಂದು ವಿವರಿಸಿದರು.

ಇವತ್ತು ನಾವು ಬಂದಿರುವುದು ರಾಜಕೀಯ ಬಣ್ಣ ಕೊಡಲು ಅಲ್ಲ, ರೈತರನ್ನು ಬೆದರಿಸಿ, ಎಫ್‍ಐಆರ್ ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸುವುದಿಲ್ಲ ಅಂತ ಡಿ.ಕೆ.ಶಿವಕುಮಾರ್ ಅವರು ಹೇಳುತ್ತಾರೆ. ದಯವಿಟ್ಟು ಈ ಯೋಜನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ.ಇದು ಅವೈಜ್ಞಾನಿಕ ಎಂಬುದು ಇಲ್ಲಿನ ರೈತರ ಅಭಿಪ್ರಾಯ. ಸರ್ಕಾರ ಅಹಂಕಾರದಿಂದ ನಿರ್ಧಾರ ತೆಗೆದುಕೊಳ್ಳಬಾರದು. ಸರ್ಕಾರ, ರೈತರ ಜೊತೆ ಕೂತು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಗೂಂಡಾಗಿರಿ, ಬೆದರಿಕೆ, ರೈತರ ಬಂಧನ ಮಾಡುವುದು ಸರಿಯಲ್ಲ  ಪಾಳೆಗಾರಿಕೆ ಯಾವುದೂ ನಡೆಯದು. ರೈತರ ಹೋರಾಟ ಮನ್ನಣೆ ಕೊಡದೆ ಮುನ್ನಡೆದರೆ ಎಚ್ಚರಿಕೆ ಎಂದರು.

ಇವತ್ತು ರೈತರು ರಸ್ತೆಗೆ ಇಳಿದಿದ್ದಾರೆ. ಮತ್ತೊಮ್ಮೆ ರೈತರು ಬೀದಿಗಿಳಿದರೆ ನಿಮ್ಮ ಸರ್ಕಾರದ ಬುಡ ಅಲುಗಾಡುತ್ತದೆ. ಎಲ್ಲ ರೈತರು, ಮುಖಂಡರನ್ನು ಕೂರಿಸಿ ವೈಜ್ಞಾನಿಕವಾಗಿ ಪರಿಶೀಲಿಸಬೇಕು. ಪಕ್ಷಾತೀತ ಹೋರಾಟ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ, ಉಸ್ತುವಾರಿ ಸಚಿವರಿಬ್ಬರಿಗೂ ವಿನಂತಿ ಮಾಡುತ್ತೇನೆ. ರೈತರ ಹೊಟ್ಟೆ ಮೇಲೆ ಹೊಡೆದು ಕೆಲಸ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.

ಯಾರಿಗೋ ನ್ಯಾಯ ಕೊಡಬೇಕು ಎಂದು ತುಮಕೂರಿನವರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಎಲ್ಲರಿಗೂ ನ್ಯಾಯ ಸಿಗುವಂತೆ ವೈಜ್ಞಾನಿಕವಾಗಿ ಪರಿಶೀಲಿಸಿ. ರೈತರ ಹೋರಾಟವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist