Modi 3.0 | ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.!

ಬೆಂಗಳೂರು, (www.thenewzmirror.com) ;

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಹುದ್ದೆಗೆ ಏರುವ ಮೂಲಕ ದಾಖಲೆ ನಿರ್ಮಿಸದ್ದು ಎಲ್ಲರಿಗೂ ಗೊತ್ತೇ ಇದೆ. ಅದರಂತೆ ಮೋದಿ ಜತೆ 71 ಸಂಸದರು ಪ್ರಮಾಣವಚನ ಸ್ವೀಕಾರ ಮಾಡಿದ್ದರು.  ಹಾಗಿದ್ರೆ ನರೇಂದ್ರ ಮೋದಿ ಅವರು ಯಾರಿಗೆ ಯಾವ ಖಾತೆ ನೀಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

RELATED POSTS

ಹೀಗಿದೆ ಸಂಪುಟ ದರ್ಜೆ ಸಚಿವರ ಪಟ್ಟಿ ಹಾಗೂ ಅವರ ಖಾತೆಗಳು

• ನರೇಂದ್ರ ಮೋದಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪರಮಾಣು ಶಕ್ತಿ, ಬಾಹ್ಯಾಕಾಶ, ಪ್ರಮುಖ ನೀತಿ ನಿರೂಪಣೆಗಳು ಹಾಗೂ ಯಾರಿಗೂ ಹಂಚಕೆಯಾಗದ ಖಾತೆಗಳು

• ಅಮಿತ್ ಶಾ (ಬಿಜೆಪಿ- ಗುಜರಾತ್)- ಗೃಹ ಖಾತೆ

• ರಾಜನಾಥ್ ಸಿಂಗ್ (ಬಿಜೆಪಿ- ಉತ್ತರ ಪ್ರದೇಶ)- ರಕ್ಷಣಾ ಖಾತೆ

• ನಿತಿನ್ ಗಡ್ಕರಿ (ಬಿಜೆಪಿ- ಮಹಾರಾಷ್ಟ್ರ)- ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಸಾರಿಗೆ

• ಜೆ.ಪಿ.ನಡ್ಡಾ (ಬಿಜೆಪಿ- ಹಿಮಾಚಲ ಪ್ರದೇಶ)- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ

• ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ- ಮಧ್ಯಪ್ರದೇಶ )-‌ ಕೃಷಿ‌, ಗ್ರಾಮೀಣಾಭಿವೃದ್ಧಿ

• ನಿರ್ಮಲಾ ಸೀತಾರಾಮನ್ (ರಾಜ್ಯಸಭೆ ಬಿಜೆಪಿ ಸದಸ್ಯೆ)- ಹಣಕಾಸು, ಕಾರ್ಪೊರೇಟ್‌ ವ್ಯವಹಾರಗಳು

• ಎಸ್.ಜೈ ಶಂಕರ್ (ರಾಜ್ಯಸಭೆ ಬಿಜೆಪಿ ಸದಸ್ಯ)- ವಿದೇಶಾಂಗ ವ್ಯವಹಾರಗಳ ಖಾತೆ

• ಮನೋಹರ ಲಾಲ್‌ ಖಟ್ಟರ್‌ (ಬಿಜೆಪಿ- ಹರಿಯಾಣ)- ಇಂಧನ‌ ಮತ್ತು ವಸತಿ

• ಎಚ್‌.ಡಿ.ಕುಮಾರಸ್ವಾಮಿ (ಜೆಡಿಎಸ್‌- ಕರ್ನಾಟಕ)- ಉಕ್ಕು ಮತ್ತು ಬೃಹತ್‌ ಕೈಗಾರಿಕೆ

• ಪಿಯೂಷ್‌ ಗೋಯಲ್‌ (ಬಿಜೆಪಿ- ಮಹಾರಾಷ್ಟ್ರ )- ವಾಣಿಜ್ಯ ಮತ್ತು ಕೈಗಾರಿಕೆ

• ಧರ್ಮೇಂದ್ರ ಪ್ರಧಾನ್ (ಬಿಜೆಪಿ- ಒಡಿಶಾ): ಶಿಕ್ಷಣ‌

• ಜಿತನ್ ರಾಮ್ ಮಾಂಝಿ (ಎಚ್‌ಎಎಂ- ಬಿಹಾರ)- ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ

• ರಾಜೀವ್‌ ರಂಜನ್‌ ಸಿಂಗ್‌ (ಜೆಡಿಯು-ಬಿಹಾರ)- ಪಂಚಾಯತ್‌ ರಾಜ್‌, ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ

• ಸರ್ಬಾನಂದ ಸೋನೊವಾಲ್‌ (ಬಿಜೆಪಿ- ಅಸ್ಸಾಂ): ಬಂದರು, ಜಲಸಾರಿಗೆ ಮತ್ತು ಜಲಮಾರ್ಗ

• ರಾಮ್‌ ಮೋಹನ್‌ ನಾಯ್ಡು (ಟಿಡಿಪಿ-ಆಂಧ್ರಪ್ರದೇಶ)- ನಾಗರಿಕ ವಿಮಾನಯಾನ

• ಪ್ರಲ್ಹಾದ್‌ ಜೋಶಿ (ಬಿಜೆಪಿ- ಕರ್ನಾಟಕ): ಆಹಾರ ಮತ್ತು ಗ್ರಾಹಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ

• ಡಾ.ವೀರೇಂದ್ರ ಕುಮಾರ್ (ಬಿಜೆಪಿ-ಮಧ್ಯಪ್ರದೇಶ)- ಸಾಮಾಜಿಕ ನ್ಯಾಯ

• ಜುವೆಲ್‌ ಒರಾಮ್‌ (ಬಿಜೆಪಿ- ಒಡಿಶಾ)- ಬುಡಕಟ್ಟು

• ಗಿರಿರಾಜ್‌ ಸಿಂಗ್‌ (ಬಿಜೆಪಿ-ಬಿಹಾರ) -‌ ಜವಳಿ

• ಅಶ್ವಿನಿ ವೈಷ್ಣವ್‌ (ಬಿಜೆಪಿ-ರಾಜಸ್ಥಾನ-ರಾಜ್ಯಸಭೆ ಸದಸ್ಯ) – ರೈಲ್ವೆ ಮತ್ತು ಮಾಹಿತಿ ಪ್ರಸಾರ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ

• ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ-ಮಧ್ಯಪ್ರದೇಶ)- ಕಮ್ಯುನಿಕೇಷನ್ಸ್‌ ಮತ್ತು ಈಶಾನ್ಯ ಪ್ರದೇಶಾಭಿವೃದ್ಧಿ ಖಾತೆ

• ಭೂಪೇಂದ್ರ ಯಾದವ್‌ (ಬಿಜೆಪಿ-ರಾಜಸ್ಥಾನ)- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ

• ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ- ರಾಜಸ್ಥಾನ): ಪ್ರವಾಸೋದ್ಯಮ ಮತ್ತು ಸಂಸ್ಕೃತಿ

• ಅನ್ನಪೂರ್ಣ ದೇವಿ (ಬಿಜೆಪಿ-ಜಾರ್ಖಂಡ್)-ಮಹಿಳಾ ಮತ್ತು ಮಕ್ಕಳ ಕಲ್ಯಾಣ

• ಕಿರಣ್‌ ರಿಜಿಜು (ಬಿಜೆಪಿ- ಅರುಣಾಚಲ ಪ್ರದೇಶ)-‌ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

• ಹರ್ದೀಪ್ ಸಿಂಗ್ ಪುರಿ (ರಾಜ್ಯಸಭೆ ಬಿಜೆಪಿ ಸದಸ್ಯ-ಪಂಜಾಬ್)- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ

• ಡಾ.ಮನ್ಸುಖ್‌ ಮಂಡಾವೀಯ (ಬಿಜೆಪಿ-ಗುಜರಾತ್)‌: ಕಾರ್ಮಿಕ ಮತ್ತು ಉದ್ಯೋಗ, ಯುವಜನ ಮತ್ತು ಕ್ರೀಡೆ

• ಜಿ.ಕಿಶನ್‌ ರೆಡ್ಡಿ (ಬಿಜೆಪಿ-ತೆಲಂಗಾಣ)- ಕಲ್ಲಿದ್ದಿಲು ಮತ್ತು ಗಣಿಗಾರಿಕೆ

• ಚಿರಾಗ್‌ ಪಾಸ್ವಾನ್‌ (ಎಲ್‌ಜೆಪಿ-ಬಿಹಾರ)-‌ ಆಹಾರ ಸಂಸ್ಕರಣೆ

• ಸಿ.ಆರ್‌.ಪಾಟೀಲ್‌ (ಬಿಜೆಪಿ-ಗುಜರಾತ್)-ಜಲಶಕ್ತಿ

• ಇಂದ್ರಜೀತ್‌ ಸಿಂಗ್‌ (ಬಿಜೆಪಿ-ಹರಿಯಾಣ)-ಸಾಂಖ್ಯಿಕ, ಯೋಜನೆ ಅನುಷ್ಠಾನ, ಯೋಜನೆ ಮತ್ತು ಸಂಸ್ಕೃತಿ

• ಡಾ.ಜಿತೇಂದ್ರ ಸಿಂಗ್‌ (ಬಿಜೆಪಿ-ಜಮ್ಮು)- ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ, ಬಾಹ್ಯಾಕಾಶ, ಪರಮಾಣು

• ಅರ್ಜುನ್‌ ರಾಮ್‌ ಮೇಘ್ವಾಲ್‌ (ಬಿಜೆಪಿ-ರಾಜಸ್ಥಾನ)- ಕಾನೂನು ಮತ್ತು ನ್ಯಾಯ

• ಪ್ರತಾಪ್‌ ರಾವ್‌ ಗಣಪತ್‌ ರಾವ್‌ ಜಾಧವ್‌ (ಶಿವಸೇನೆ ಏಕನಾಥ್‌ ಶಿಂಧೆ ಬಣದ ಸಂಸದ-ಮಹಾರಾಷ್ಟ್ರ)- ಆಯುಷ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ

• ಜಯಂತ್‌ ಚೌಧರಿ (ಆರ್‌ಎಲ್‌ಡಿ-ಉತ್ತರ ಪ್ರದೇಶ)- ಕೌಶಲಾಭಿವೃದ್ಧಿ ಹಾಗೂ ಉದ್ಯಮ, ಶಿಕ್ಷಣ

• ಜಿತಿನ್‌ ಪ್ರಸಾದ್‌ (ಬಿಜೆಪಿ-ಉತ್ತರ ಪ್ರದೇಶ)- ವಾಣಿಜ್ಯ, ಕೈಗಾರಿಕೆ, ವಿದ್ಯುತ್‌ ಮತ್ತು ಮಾಹಿತಿ ತಂತ್ರಜ್ಞಾನ

• ಶ್ರೀಪಾದ್‌ ನಾಯ್ಕ್ (ಬಿಜೆಪಿ-ಗೋವಾ)- ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ

• ಪಂಕಜ್‌ ಚೌಧರಿ (ಬಿಜೆಪಿ-ಉತ್ತರ ಪ್ರದೇಶ)-‌ ಹಣಕಾಸು

• ಕ್ರಿಶನ್‌ ಪಾಲ್‌ (ಬಿಜೆಪಿ-ಹರಿಯಾಣ)- ಸಹಕಾರ

• ರಾಮ್‌ದಾಸ್‌ ಅಠಾವಳೆ (ಆರ್‌ಪಿಐ-ಮಹಾರಾಷ್ಟ್ರ)- ಸಾಮಾಜಿಕ ನ್ಯಾಯ

• ರಾಮನಾಥ್‌ ಠಾಕೂರ್‌ (ಜೆಡಿಯು-ಬಿಹಾರ)- ಕೃಷಿ ಮತ್ತು ರೈತರ ಕಲ್ಯಾಣ

• ನಿತ್ಯಾನಂದ್‌ ರಾಯ್‌ (ಬಿಜೆಪಿ-ಬಿಹಾರ)- ಗೃಹ

• ಅನುಪ್ರಿಯಾ ಪಟೇಲ್‌ (ಅಪ್ನಾದಳ್‌ (ಎಸ್‌)-ಉತ್ತರ ಪ್ರದೇಶ)- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ

• ವಿ. ಸೋಮಣ್ಣ (ಬಿಜೆಪಿ-ಕರ್ನಾಟಕ)- ಜಲಶಕ್ತಿ ಹಾಗೂ ರೈಲ್ವೆ

• ಪೆಮ್ಮಸಾನಿ ಚಂದ್ರಶೇಖರ್‌ (ಟಿಡಿಪಿ-ಆಂಧ್ರಪ್ರದೇಶ)- ಗ್ರಾಮೀಣಾಭಿವೃದ್ಧಿ, ಸಂವಹನ

• ಎಸ್‌ಪಿ ಸಿಂಗ್‌ ಬಘೇಲ್‌ (ಬಿಜೆಪಿ-ಉತ್ತರ ಪ್ರದೇಶ)- ಮೀನುಗಾರಿಕೆ, ಪಶು ಸಂಗೋಪನೆ, ಪಂಚಾಯತ್‌ ರಾಜ್

• ಶೋಭಾ ಕರಂದ್ಲಾಜೆ (ಬಿಜೆಪಿ-ಕರ್ನಾಟಕ)-‌ ಎಂಎಸ್‌ಎಂಇ, ಕಾರ್ಮಿಕ ಮತ್ತು ಉದ್ಯೋಗ

• ಕೀರ್ತಿ ವರ್ಧನ್‌ ಸಿಂಗ್‌ (ಬಿಜೆಪಿ-ಉತ್ತರ ಪ್ರದೇಶ)- ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ, ವಿದೇಶಾಂಗ ಇಲಾಖೆ

• ಬಿ.ಎಲ್‌.ವರ್ಮಾ (ಬಿಜೆಪಿ-ಉತ್ತರ ಪ್ರದೇಶ)- ಗ್ರಾಹಕ ರಕ್ಷಣೆ, ಆಹಾರ, ನಾಗರಿಕ ಪೂರೈಕೆ, ಸಾಮಾಜಿಕ ನ್ಯಾಯ

• ಶಂತನು ಠಾಕೂರ್‌ (ಬಿಜೆಪಿ- ಪಶ್ಚಿಮ ಬಂಗಾಳ)- ಬಂದರು, ಜಲಸಾರಿಗೆ ಮತ್ತು ಜಲಮಾರ್ಗ

• ಸುರೇಶ್‌ ಗೋಪಿ (ಬಿಜೆಪಿ-ಕೇರಳ)- ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪ್ರವಾಸೋದ್ಯಮ

• ಡಾ.ಎಲ್‌.ಮುರುಗನ್‌ (ಬಿಜೆಪಿ-ತಮಿಳುನಾಡು)- ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಖಾತೆ

• ಅಜಯ್‌ ತಮ್ಟಾ (ಬಿಜೆಪಿ-ಉತ್ತರಾಖಂಡ)- ರಸ್ತೆ ಸಾರಿಗೆ ಮತ್ತು ಹೆದ್ದಾರಿ

• ಬಂಡಿ ಸಂಜಯ್‌ ಕುಮಾರ್‌ (ಬಿಜೆಪಿ-ತೆಲಂಗಾಣ)- ಗೃಹ

• ಕಮಲೇಶ್‌ ಪಾಸ್ವಾನ್‌ (ಬಿಜೆಪಿ-ಉತ್ತರ ಪ್ರದೇಶ)- ಗ್ರಾಮೀಣಾಭಿವೃದ್ಧಿ

• ಭಾಗೀರಥ್‌ ಚೌಧರಿ (ಬಿಜೆಪಿ-ರಾಜಸ್ಥಾನ)- ಕೃಷಿ ಮತ್ತು ರೈತರ ಕಲ್ಯಾಣ

• ಸತೀಶ್‌ ಚಂದ್ರ ದುಬೆ (ಬಿಜೆಪಿ-ಬಿಹಾರ)- ಕಲ್ಲಿದ್ದಿಲು ಮತ್ತು ಗಣಿಗಾರಿಕೆ

• ಸಂಜಯ್‌ ಸೇಠ್‌ (ಬಿಜೆಪಿ-ಜಾರ್ಖಂಡ್)- ರಕ್ಷಣಾ ಖಾತೆ

• ರವನೀತ್‌ ಸಿಂಗ್‌ ಬಿಟ್ಟು (ಬಿಜೆಪಿ-ಪಂಜಾಬ್)- ಆಹಾರ ಸಂಸ್ಕರಣೆಗಳ ಉದ್ಯಮ ಮತ್ತು ರೈಲ್ವೆ

• ದುರ್ಗಾದಾಸ್‌ ಉಯಿಕೆ (ಬಿಜೆಪಿ- ಮಧ್ಯಪ್ರದೇಶ)- ಬುಡಕಟ್ಟು ವ್ಯವಹಾರಗಳ ಇಲಾಖೆ

• ರಕ್ಷಾ ನಿಖಿಲ್‌ ಖಡ್ಸೆ (ಬಿಜೆಪಿ-ಮಹಾರಾಷ್ಟ್ರ)- ಯುವಜನ ಮತ್ತು ಕ್ರೀಡೆ

• ಸುಕಾಂತ ಮಜುಂದಾರ್‌ (ಬಿಜೆಪಿ-ಪಶ್ಚಿಮ ಬಂಗಾಳ)- ಶಿಕ್ಷಣ ಮತ್ತು ಈಶಾನ್ಯ ಪ್ರದೇಶಗಳ ಅಭಿವೃದ್ಧಿ

• ಸಾವಿತ್ರಿ ಠಾಕೂರ್‌ (ಬಿಜೆಪಿ-ಮಧ್ಯಪ್ರದೇಶ)- ಮಹಿಳಾ ಮತ್ತು ಮಕ್ಕಳ ಕಲ್ಯಾಣ

• ತೋಖನ್‌ ಸಾಹು (ಬಿಜೆಪಿ-ಛತ್ತೀಸ್‌ಗಢ)- ವಸತಿ ಮತ್ತು ನಗರಾಭಿವೃದ್ಧಿ

• ಡಾ.ರಾಜ್‌ಭೂಷಣ್‌ ಚೌಧರಿ (ಬಿಜೆಪಿ-ಬಿಹಾರ)- ಜಲಶಕ್ತಿ

• ಭೂಪತಿ ರಾಜು ಶ್ರೀನಿವಾಸ್‌ ವರ್ಮಾ (ಬಿಜೆಪಿ-ಆಂಧ್ರಪ್ರದೇಶ)- ಬೃಹತ್‌ ಕೈಗಾರಿಕೆ ಮತ್ತು ಉಕ್ಕು

• ಹರ್ಷ ಮಲ್ಹೋತ್ರಾ (ಬಿಜೆಪಿ-ದೆಹಲಿ)- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಕಾರ್ಪೊರೇಟ್‌ ವ್ಯವಹಾರಗಳ ಖಾತೆ

• ನಿಮುಬೆನ್‌ ಬಾಂಭಣಿಯಾ (ಬಿಜೆಪಿ-ಗುಜರಾತ್)- ಗ್ರಾಹಕ ರಕ್ಷಣೆ, ಆಹಾರ ಮತ್ತು ನಾಗರಿಕ ಪೂರೈಕೆ

• ಮುರಳೀಧರ್‌ ಮೊಹೊಲ್‌ (ಬಿಜೆಪಿ-ಮಹಾರಾಷ್ಟ್ರ)- ಸಹಕಾರ ಮತ್ತು ನಾಗರಿಕ ವಿಮಾನಯಾನ

• ಜಾರ್ಜ್‌ ಕುರಿಯನ್‌ (ಬಿಜೆಪಿ-ಕೇರಳ)- ಅಲ್ಪಸಂಖ್ಯಾತ ವ್ಯವಹಾರಗಳು, ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ

• ಪವಿತ್ರ ಮಾರ್ಗರಿಟಾ (ಬಿಜೆಪಿ-ಅಸ್ಸಾಂ)- ವಿದೇಶಾಂಗ ವ್ಯವಹಾರಗಳು ಮತ್ತು ಜವಳಿ

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist