‘ಬಹುಕೋಟಿ ಬಂಗಲೆಯ ಭ್ರಷ್ಟಾಚಾರ ಮರೆಮಾಚುವುದೇ ಕೇಜ್ರಿವಾಲ್ ಉದ್ದೇಶ’

ನವದೆಹಲಿ, (www.thenewzmirror.com);

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಉಪಕ್ರಮದ ಮೇರೆಗೆ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರ (ತಿದ್ದುಪಡಿ) ಮಸೂದೆ, 2023 ಅನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

ತಮ್ಮ ಅಜೇಯ ತರ್ಕವನ್ನು ಮತ್ತೊಮ್ಮೆ  ಪ್ರದರ್ಶಿಸುತ್ತ ‘ಶಾ’ ಇರುವಲ್ಲಿ ಸಾಧ್ಯವಿಲ್ಲವೆನ್ನುವ ಮಾತಿಲ್ಲ’  ಎಂಬುದನ್ನು ಅಮಿತ್ ಶಾ ಮತ್ತೊಮ್ಮೆ ಸಾಬೀತು ಪಡಿಸಿದರು. ಲೋಕಸಭೆಯಲ್ಲಿ ಚರ್ಚೆ ಆರಂಭಿಸಿದ ಶಾ, ‘1993ರಲ್ಲಿ ದೆಹಲಿಯಲ್ಲಿ ವಿಧಾನಸಭೆ ಆರಂಭವಾಯಿತು. ಅಂದಿನಿಂದ, ದೆಹಲಿಯಲ್ಲಿ ಬಿಜೆಪಿ ಸರ್ಕಾರ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಕೆಲವೊಮ್ಮೆ ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿತ್ತು. ಇಲ್ಲಿಯವರೆಗೆ ಎರಡೂ ಪಕ್ಷಗಳು  ಈ ವಿಷಯದಲ್ಲಿ ಯಾವುದೇ ಸಂಘರ್ಷವಿಲ್ಲದೇ ನಡೆದುಕೊಂಡಿವೆ.

RELATED POSTS

ಲೋಕಸಭೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ



ಆದರೆ 2015 ರಲ್ಲಿ ಕೇಜ್ರಿವಾಲ್ ಸರ್ಕಾರ ರಚನೆಯಾದಾಗಿನಿಂದ ಸಮಸ್ಯೆ ಪ್ರಾರಂಭವಾಯಿತು. ಆಪ್(AAP) ಉದ್ದೇಶ ಸಾರ್ವಜನಿಕ ಸೇವೆಯಲ್ಲ, ಈ ಮಸೂದೆಯನ್ನು ವಿರೋಧಿಸುವ ಮೂಲಕ ದೆಹಲಿ ಸರ್ಕಾರದ ಭ್ರಷ್ಟಾಚಾರವನ್ನು ಮರೆಮಾಚುವುದು. ಉಳಿದ ವಿರೋಧ ಪಕ್ಷಗಳ ವಿರೋಧವೂ ಕೇವಲ ಮೈತ್ರಿ ಉಳಿಸಿಕೊಳ್ಳಲು ಮಾತ್ರ. ವಿಪಕ್ಷಗಳು ಎಷ್ಟೇ ಮೈತ್ರಿ ಮಾಡಿಕೊಂಡರೂ 2024ರಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ.

ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ 2023 ಅನ್ನು ವಿರೋಧ ಪಕ್ಷಗಳು ವಿರೋಧಿಸಿದವು. ಈ ಮಸೂದೆಯ ಅಂಗೀಕಾರವು ಆಪ್ ಹೊರತುಪಡಿಸಿ ಯಾವುದೇ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲದಿದ್ದರೂ, ವಿರೋಧ ಪಕ್ಷದ ಪ್ರತಿಭಟನೆಯು ಕೇವಲ ತಮ್ಮ ಮೈತ್ರಿಯನ್ನು ರಕ್ಷಿಸುವ ಗುರಿಯನ್ನು ಮಾತ್ರ ಹೊಂದಿತ್ತು. ಈಗಾಗಲೇ  ಇರುವ ಮಹಾಮೈತ್ರಿಕೂಟದ ದುರ್ಬಲ ಅಡಿಪಾಯವನ್ನು ಗಮನಿಸಿದರೆ, ಮಸೂದೆಯನ್ನು ಅಂಗೀಕರಿಸಿದ ನಂತರ ಕೇಜ್ರಿವಾಲ್ ತಕ್ಷಣವೇ ಮೈತ್ರಿಯಿಂದ ಹೊರಬರುವುದು ಖಚಿತ.

ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಸದನದ ಮುಖಂಡರು ನ್ಯಾಯಾಲಯದ ಸಂಪೂರ್ಣ ತೀರ್ಪನ್ನು ಓದಿಲ್ಲ ಎಂಬುದು ಶಾರವರ ವಾದ. ವಿಧಿ 239A ಅಡಿಯಲ್ಲಿ, ದೆಹಲಿಗೆ ಸಂಬಂಧಿಸಿದ  ಯಾವುದೇ ವಿಷಯದ ಬಗ್ಗೆ ಕಾನೂನುಗಳನ್ನು ಜಾರಿಗೊಳಿಸಲು ಸಂಸತ್ತು ಸಂಪೂರ್ಣ ಅಧಿಕಾರವನ್ನು ಹೊಂದಿದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ.

ತಮ್ಮ ವಿಶಿಷ್ಟ ರೀತಿಯಲ್ಲಿ, ಅಮಿತ್ ಶಾರವರು ದೆಹಲಿಯ ರಚನೆಯ ಇತಿಹಾಸವನ್ನು ವಿವರಿಸಿದರು, 1911 ರಲ್ಲಿ ಬ್ರಿಟಿಷರು ಪಂಜಾಬ್‌ನಿಂದ ಸ್ವತಂತ್ರವಾಗಿ ಮೆಹ್ರೌಲಿ ಮತ್ತು ದೆಹಲಿ ತೆಹಸಿಲ್‌ಗಳನ್ನು ರಚಿಸಿದರು. ತರುವಾಯ, ಸಿದ್ದರಾಮಯ್ಯ ಸಮಿತಿಯು  ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ನೀಡಬೇಕೆಂದು ಒತ್ತಾಯಿಸಿತು.  ಆದರೆ ಪಂಡಿತ್ ನೆಹರು, ಸರ್ದಾರ್ ಪಟೇಲ್, ರಾಜೇಂದ್ರ ಪ್ರಸಾದ್ ಮತ್ತು ಅಂಬೇಡ್ಕರ್ ಅವರು ಇದಕ್ಕೆ   ವಿರೋಧವನ್ನು ವ್ಯಕ್ತಪಡಿಸಿದರು.

ಚರ್ಚೆಯ ಉದ್ದಕ್ಕೂ ದೆಹಲಿ ಸೇವೆಗಳ ಮಸೂದೆಗೆ ಬಲವಾದ ಬೆಂಬಲ ನೀಡಿದ ಶಾ ಈ ವಿವಾದವು ಕೇವಲ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿರದೇ ಬಂಗಲೆಯ ನಿರ್ವಹಣೆ ಮತ್ತು ತನಿಖಾ ಇಲಾಖೆಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿದೆ ಎಂಬುದನ್ನು ಸೂಚಿಸುತ್ತದೆ. ಇದು ಮದ್ಯದ ಹಗರಣದಲ್ಲಿನ ಅಕ್ರಮವನ್ನು ಮರೆಮಾಚುವ ಮತ್ತು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist