ದೇಶದಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗದ ವ್ಯವಸ್ಥೆ : ಅಮಿತ್ ಶಾ

ಬೆಂಗಳೂರು,/ನವದೆಹಲಿ; (www.thenewzmirror.com);

ದೇಶದಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಪ್ರಧಾನಿ  ಮೋದಿ ಒಂದು ದೃಢವಾದ ವ್ಯವಸ್ಥೆಯನ್ನ ಸ್ಥಾಪಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದರು.

RELATED POSTS

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳು (ಎಆರ್ಡಿಬಿ) ಮತ್ತು ಸಹಕಾರ ಸಂಘಗಳ (ಆರ್ಸಿಎಸ್) ರಿಜಿಸ್ಟ್ರಾರ್ ಕಚೇರಿಗಳ ಗಣಕೀಕರಣದ ಯೋಜನೆಯನ್ನು  ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ಈ ಯೋಜನೆಯು ಸಹಕಾರಿ ವಲಯದಲ್ಲಿ ಕಾಗದದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವ ಮತ್ತು ಕೇಂದ್ರ ಗೃಹ  ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ನುರಿತ ಮಾರ್ಗದರ್ಶನದಲ್ಲಿ ಸರಿಸುಮಾರು 23 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ ಶಾ, ಇಂದು ಲಕ್ಷಾಂತರ ಮನೆಗಳಿಗೆ ಗ್ಯಾಸ್, ವಿದ್ಯುತ್, 5 ಕಿಲೋಗ್ರಾಂ ಉಚಿತ ಪಡಿತರ, ಮತ್ತು ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಮೋದಿ ಸರ್ಕಾರ ಬಡವರ ಕಲ್ಯಾಣಕ್ಕಾಗಿ ನಿರಂತರ ಕೆಲಸ ಮಾಡುತ್ತಿದೆ ಎಂದು ಅಂಕಿ ಸಮೇತ ವಿವರಿಸಿದರು.

ಸಹಕಾರ ಮಂತ್ರಾಲಯ ರಚನೆಯ ಬೇಡಿಕೆ ದೇಶದಲ್ಲಿ ಬಹಳ ದಿನಗಳಿಂದ ಬಾಕಿ ಉಳಿದಿದ್ದರೂ ಯಾವ ಸರಕಾರವೂ ಇತ್ತ ಗಮನಹರಿಸಿಲ್ಲ.  2021 ರಲ್ಲಿ, ಮೋದಿಯವರು ಸಹಕಾರ ಸಚಿವಾಲಯವನ್ನು ಸ್ಥಾಪಿಸಿ, ಅದರ ನಾಯಕತ್ವವನ್ನು ‘ಅಂತ್ಯೋದಯ’ ರಾಜಕೀಯಕ್ಕೆ ಹೆಸರುವಾಸಿಯಾದ ಅಮಿತ್ ಶಾರಿಗೆ ವಹಿಸಿದರು.  ದೀರ್ಘ ಕಾಲದಿಂದ ಸಹಕಾರಿ ಆಂದೋಲನದೊಂದಿಗೆ ಒಡನಾಟ ಹೊಂದಿರುವ ಶಾ, ಹದಗೆಟ್ಟಿದ್ದ ಸಹಕಾರಿ ಕ್ಷೇತ್ರವನ್ನು ಪರಿಣಾಮಕಾರಿಯಾಗಿ ಪುನಶ್ಚೇತನಗೊಳಿಸಿದ್ದಾರೆ.

ಮೋದಿ ನಾಯಕತ್ವ ಮತ್ತು ಅಮಿತ್ ಶಾ ನೀತಿಗಳ ಮೂಲಕ, ಸಹಕಾರ ಸಚಿವಾಲಯವು ‘ಸಹಕಾರದಿಂದ ಸಮೃದ್ಧಿ’ ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸಲು ಬದ್ಧವಾಗಿದೆ.  ಎಆರ್ಡಿಬಿ ಮತ್ತು ಆರ್ಸಿಎಸ್ ಕಚೇರಿಗಳ ಗಣಕೀಕರಣವು, ಈ ಸಚಿವಾಲಯವು ತೆಗೆದುಕೊಂಡ ಮಹತ್ವದ ಕ್ರಮಗಳಲ್ಲಿ ಒಂದಾಗಿದೆ ಎಂದು ತಿಳಿಸಿದ ಶಾ, ಈ ಯೋಜನೆಯ ಮೂಲಕ ಸಂಪೂರ್ಣ ಸಹಕಾರಿ ಪರಿಸರ ವ್ಯವಸ್ಥೆಯನ್ನು ಡಿಜಿಟಲ್ ವೇದಿಕೆಗೆ ತರುವ ಮೂಲಕ ಸಹಕಾರಿ ವಲಯದಲ್ಲಿ ಆಧುನೀಕರಣ ಮತ್ತು ದಕ್ಷತೆಯನ್ನು ಹೆಚ್ಚಿಸಲು ಕಟಿಬದ್ದರಾಗಿದ್ದಾರೆ ಎಂದರು.

ಇಂದು, PACSಗಳ ಗಣಕೀಕರಣದೊಂದಿಗೆ, ಅವುಗಳನ್ನು ಸಾಮಾನ್ಯ ರಾಷ್ಟ್ರೀಯ ಸಾಫ್ಟ್ವೇರ್ ಮೂಲಕ ನಬಾರ್ಡ್ನೊಂದಿಗೆ ಸಂಯೋಜಿಸಲಾಗುತ್ತಿದೆ.  ಬಹುಪಯೋಗಿ ಸಾಮಾನ್ಯ ಸೇವಾ ಕೇಂದ್ರವಾಗಿ ಡಿಜಿಟಲ್ ಸೇವೆಗಳನ್ನು ಪ್ರಾರಂಭಿಸಲು PACS ಗೆ ಅಧಿಕಾರ ನೀಡಲಾಗುತ್ತಿದೆ.  ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಹಿಡಿದು ಇಡೀ ಸಹಕಾರಿ ವ್ಯವಸ್ಥೆಗೆ ಆಧುನೀಕರಣ ನಡೆಯುತ್ತಿದೆ.  ‘ಸಹಕಾರದಿಂದ ಸಮೃದ್ಧಿ’ ಎಂಬ ಮಂತ್ರದೊಂದಿಗೆ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಹಕಾರಿ ಸಂಘಗಳಿಗೆ ಈಗ ಮೋದಿ-ಶಾ ಜೋಡಿ ಹೊಸ ಆಯಾಮ ನೀಡುತ್ತಿದೆ ಎನ್ನುವುದು ಅತಿಶಯೋಕ್ತಿಯಲ್ಲ.  ‘ಯಶಸ್ಸನ್ನು ಸಾಧಿಸುವ ಈ ಸಂಕಲ್ಪ’ದ ಪ್ರಯಾಣದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯಾದ ಭಾರತವು ವಿಶ್ವದಲ್ಲಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಅಂತ ಅಭಿಪ್ರಾಯ ಪಟ್ಟರು.

ಶಾ ಅವರ ನೀತಿಗಳ ಅನುಸಾರ, ಸಹಕಾರಿಗಳನ್ನು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿ ಮಾಡಲು ಮತ್ತು ಸಹಕಾರಿಗಳ ಮೂಲಕ ಗ್ರಾಮೀಣ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ವೇಗವಾಗಿ ಕೆಲಸ ಮಾಡಲಾಗುತ್ತಿದೆ.  ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ನೀತಿಗಳಿಗೆ ಹೆಸರಾದ ಭಾರತೀಯ ರಾಜಕೀಯದ ಚಾಣಕ್ಯ ಅಮಿತ್ ಶಾ ಅವರ ನುರಿತ ಮಾರ್ಗದರ್ಶನದಲ್ಲಿ ಸಹಕಾರ ಸಚಿವಾಲಯವು ಅಭೂತಪೂರ್ವ ಯೋಜನೆಗಳ ಮೂಲಕ ಸಹಕಾರಿ ಸಂಸ್ಥೆಗಳ ಅಡಿಪಾಯವನ್ನು ಬಲಪಡಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist